Advertisement

ತಲೆಮರೆಸಿಕೊಂಡಿದ್ದ ಕುಖ್ಯಾತನ ಬಂಧನ

10:49 AM Sep 01, 2019 | Team Udayavani |

ಮಂಗಳೂರು: ನಗರದ ಉದ್ಯಮಿ ವಿಜಯೇಂದ್ರ ಭಟ್‌ ಅವರ ಕಾರಿನ ಮೇಲೆ ಶೂಟೌಟ್‌ ಮಾಡಿದ್ದು ಸಹಿತ 7 ಪ್ರಕರಣಗಳಲ್ಲಿ ಭಾಗಿಯಾಗಿ 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ನಿಡ್ಡೆಲ್‌ ಮರೋಳಿ ನಿವಾಸಿ ದೀಕ್ಷಿತ್‌ ಪೂಜಾರಿ (31)ಯನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳ ಬಂಧಿಸಿದೆ.

Advertisement

ಪ್ರಕರಣ ವಿವರ
ಭೂಗತ ಲೋಕದ ಪಾತಕಿ ವಿಕ್ಕಿ ಶೆಟ್ಟಿ ಸೂಚನೆಯಂತೆ ಸುಧೀಂದ್ರ ಸೂಪರ್‌ ಮಾರ್ಕೆಟ್‌ ಮತ್ತು ಸಾಯಿಬೀನ್‌ ಕಾಂಪ್ಲೆಕ್ಸ್‌ ಮಾಲಕ ವಿಜಯೇಂದ್ರ ಭಟ್‌ ಅವರ ಕಾರಿಗೆ ಬಲ್ಲಾಳ್‌ಬಾಗ್‌- ಮಣ್ಣ ಗುಡ್ಡ ರಸ್ತೆಯಲ್ಲಿ ಪಿಸ್ತೂ ಲಿನಿಂದ ಗುಂಡು ಹೊಡೆದ ಪ್ರಕರಣದಲ್ಲಿ ದೀಕ್ಷಿತ್‌ ಪೂಜಾರಿ ಆರೋಪಿ ಯಾಗಿದ್ದ.
ಮಂಗಳೂರು ನಗರ ಮತ್ತು ಉಡುಪಿಯಲ್ಲಿ ಒಟ್ಟು 7 ಪ್ರಕರಣಗಳು ಈತನ ಮೇಲಿವೆ.

ಬರ್ಕೆ ಠಾಣೆಯಲ್ಲಿ ಕೊಲೆ, ಶೂಟೌಟ್‌ ಸಹಿತ ಮೂರು ಪ್ರಕರಣ, ಪಾಂಡೇಶ್ವರ ಠಾಣೆ ಯಲ್ಲಿ ಕೊಲೆ ಪ್ರಕರಣ, ಬಂದರ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ, ಕದ್ರಿ ಠಾಣೆಯಲ್ಲಿ ಗಾಂಜಾ ಮತ್ತು ಹಲ್ಲೆ ಪ್ರಕರಣ, ಸುರತ್ಕಲ್‌ ಹಾಗೂ ಉರ್ವ ಠಾಣೆಯಲ್ಲಿ ಹಲ್ಲೆ ಪ್ರಕರಣ ಹಾಗೂ ಉಡುಪಿ ಠಾಣೆಯಲ್ಲಿ ಆಮ್ಸ್‌ì ಆ್ಯಕ್ಟ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಈತನ ವಿರುದ್ಧ ವಾರಂಟ್‌ ಹೊರಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next