Advertisement

ಕೋವಿಡ್ ವಿರುದ್ಧದ ಕಾರ್ಯಾಚರಣೆಗೆ ನೌಕಾಪಡೆ ಸಿದ್ಧತೆ

08:45 PM Apr 20, 2021 | Team Udayavani |

ಪಣಜಿ: ಕೋವಿಡ್‌-19 ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ನೌಕಾಪಡೆ ಹೆಚ್ಚಿನ ಮಟ್ಟದ ಕಾರ್ಯಾಚರಣೆ ಸಿದ್ಧತೆ ಮಾಡಿಕೊಂಡಿದೆ ಮತ್ತು ಯುದ್ಧಕ್ಕೆ ಸಿದ್ಧ ಭಂಗಿಯಲ್ಲಿಯೇ ಉಳಿದಿದೆ ಎಂದು ಕೇಂದ್ರ ರಕ್ಷಣಾ ಇಲಾಖೆ ರಾಜ್ಯ ಸಚಿವ ಶ್ರೀಪಾದ ನಾಯ್ಕ ಹೇಳಿದ್ದಾರೆ.

Advertisement

ಗೋವಾ ವಾಸ್ಕೊದ ಐಎನ್‌ಎಸ್‌ ನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯವಾಗಿ ನಿರ್ಮಿಸಲಾದ ಅಡ್ವಾನ್ಸ್‌ ಲೈಟ್‌ ಹೆಲಿಕ್ಯಾಪ್ಟರ್‌ (ಇಂಡಿಯನ್‌ ನೇವಲ್‌ ಏರ್‌ ಸ್ಕ್ವಾಡರ್ನ್-323) ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕಳೆದ ವರ್ಷ ನಾವು ಅನೇಕ ಸವಾಲು ಎದುರಿಸಬೇಕಾಯಿತು. ನಮ್ಮ ರಾಷ್ಟ್ರೀಯ ಭದ್ರತೆಯ ಸವಾಲುಗಳ ಜೊತೆಗೆ ಎಲ್‌ಎಸಿಯಲ್ಲಿ ಭದ್ರತಾ ಪರಿಸ್ಥಿತಿ ಮತ್ತು ಕೋವಿಡ್‌-19 ಸಾಂಕ್ರಾಮಿಕದಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ನೌಕಾಪಡೆಯು ಹೆಚ್ಚಿನ ಕಾರ್ಯಾಚರಣೆ ಸಿದ್ಧತೆ ಮಾಡಿಕೊಂಡಿದೆ ಎಂದರು.

ವೆಸ್ಟರ್ನ್ ನೃವಲ್‌ ಕಮಾಂಡ್‌ನ‌ ಧ್ವಜಾಧಿಕಾರಿ ಎಡ್ಮಿರಲ್‌ ಆರ್‌. ಹರಿಕುಮಾರ್‌ ಮತ್ತು ಇತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next