Advertisement

ನಿಗೂಢ ರಾಂಚಿ

09:41 PM Sep 26, 2019 | Team Udayavani |

ರಾಂಚಿ – ಈ ಊರಿನ ಹೆಸರು ಕೇಳುತ್ತಿದ್ದಂತೆ ನಿಮಗೆ ಕ್ರಿಕೆಟಿಗ ಎಂ.ಎಸ್‌.ಧೋನಿ ನೆನಪಾಗುತ್ತಾರೆ. ಈಗ ಅವರ ಊರ ಹೆಸರನ್ನೇ ಶೀರ್ಷಿಕೆಯನ್ನಾಗಿಸಿ, ಸಿನಿಮಾವೊಂದು ತಯಾರಾಗಿದೆ. ಹೌದು, “ರಾಂಚಿ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ತಯಾರಾಗಿದೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿರುವ ಪ್ರಭು ಮುಂಡುರ್‌ ಈ ಚಿತ್ರದ ನಾಯಕ. ಶಶಿಕಾಂತ್‌ ಗಟ್ಟಿ ಈ ಚಿತ್ರದ ನಿರ್ದೇಶಕರು. ರಾಂಚಿಯಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಈ ಸಿನಿಮಾ ಮಾಡಲಾಗಿದೆ ಎಂಬ ವಿವರ ಚಿತ್ರತಂಡದ್ದು. 2009ರಲ್ಲಿ ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ಕರ್ನಾಟಕದ ಒಂದಷ್ಟು ಮಂದಿ ತಂತ್ರಜ್ಞರನ್ನು ಕರೆಸಿಕೊಂಡು ಕೊಲ್ಲಲಾಗಿತ್ತು. ಈ ಅಂಶದ ಸುತ್ತ “ರಾಂಚಿ’ ಸಿನಿಮಾ ಸಾಗುತ್ತದೆಯಂತೆ.

Advertisement

ಚಿತ್ರದಲ್ಲಿ ಪ್ರಭು ಮುಂಡುರ್‌ ನಿರ್ದೇಶಕನ ಪಾತ್ರ ಮಾಡಿದ್ದಾರಂತೆ. ದಿವ್ಯ ಉರುಡುಗ ಈ ಚಿತ್ರದ ನಾಯಕಿ. ಅವರಿಲ್ಲಿ ಸಹಾಯಕ ನಿರ್ದೇಶಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಐಪಿಎಸ್‌ ಅಧಿಕಾರಿ ಪ್ರವೀಣ್‌ ಕುಮಾರ್‌ ಸಿಂಗ್‌ ಪಾತ್ರ ಪ್ರಮುಖವಾಗಿದ್ದು, ಆ ಪಾತ್ರವನ್ನು ಬಾಲಿವುಡ್‌ ನಟ ತೋತಾರಾಯ್‌ ಚೌಧರಿ ನಿರ್ವಹಿಸಿದ್ದಾರೆ. ಇನ್ನು, ಕಿರುತೆರೆಯಲ್ಲಿ ವಿಲನ್‌ ಆಗಿ ಮಿಂಚಿರುವ ಲಕ್ಷ್ಮಣ್‌ ಇಲ್ಲೂ ವಿಲನ್‌ ಆಗಿ ಅಬ್ಬರಿಸಿದ್ದಾರೆ.

ಚಿತ್ರಕ್ಕೆ ಮಣಿಕಾಂತ್‌ಕದ್ರಿ ಸಂಗೀತ, ಸಂದೀಪ್‌ ಚೌಟ -ಆಲ್ವಿನ್‌ ಫ‌ರ್ನಾಂಡೀಸ್‌ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. “ಡಬ್ಬಲ್‌ ಇಂಜಿನ್‌’ ಚಿತ್ರ ನಿರ್ಮಾಣ ಮಾಡಿರುವ ಅರುಣ್‌ಕುಮಾರ್‌.ಎನ್‌. ಅವರು ಗೆಳೆಯ ರುದ್ರಾನಂದ.ಆರ್‌.ಎನ್‌ ಅವರೊಂದಿಗೆ ಸೇರಿಕೊಂಡು ಸಿನಿಮಾ ನಿರ್ಮಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next