Advertisement
ಮೂಲತಃ ಹರಿ ಹರದವನಾಗಿದ್ದು ಬೀಡಿನಗುಡ್ಡೆಯಲ್ಲಿರುವ ಉಡುಪಿ ನಗರಸಭೆಯ ನಿರಾಶ್ರಿತರ ವಸತಿ ಕಟ್ಟಡದಲ್ಲಿ ವಾಸವಿದ್ದ ಸಂತೋಷ (32) ಕೊಲೆ ಗೀಡಾದವರು. ಮಾ.9ರ ರಾತ್ರಿ 12.30ರ ಆಸುಪಾಸಿನಲ್ಲಿ ಕೊಲೆ ನಡೆಸಲಾಗಿದೆ.
ಸಂತೋಷ ಜತೆಗೆ ಕೆಲಸ ಮಾಡುತ್ತಿದ್ದ ಕುಮಾರ, ಹರೀಶ ಮತ್ತು ರಮೇಶ ಅವರು ಹಣದ ವಿಚಾರದ ತಕರಾರಿಗೆ ಸಂಬಂಧಿಸಿ ಬಲವಾದ ಅಲ್ಯುಮಿನಿಯಂ ಪೈಪ್, ಬೆಲ್ಟ್ನಿಂದ ಹಲ್ಲೆ ಮಾಡಿ ತಲೆಯನ್ನು ಗೋಡೆಗೆ ಜಜ್ಜಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸಂತೋಷ ಅವರ ಮೃತದೇಹ ವಸತಿ ಕಟ್ಟಡ ಎದುರಿನ ರಸ್ತೆ ಮೋರಿಯಲ್ಲಿ ಬಿದ್ದಿರುವುದು ರವಿವಾರ ಬೆಳಗ್ಗೆ ಪತ್ತೆಯಾಗಿತ್ತು.