Advertisement
ಈ ಕೃತ್ಯದಲ್ಲಿ ರೌಡಿಶೀಟರ್ ವಿನೋದ್ ಅಲಿಯಾಸ್ ಕೋತಿ ತಂಡದ ಕೈವಾಡವಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಶನಿವಾರ ರಾತ್ರಿ ಭರತ್ನನ್ನು ಪಾಳುಬಿದ್ದಿರುವ ಆಲ್ಫಾ ಫ್ಯಾಕ್ಟರಿಗೆ ಕರೆತಂದಿರುವ ದುಷ್ಕರ್ಮಿಗಳು, ಆತನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಬಳಿಕ ಆತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.
Related Articles
ಶನಿವಾರ ರಾತ್ರಿ ನಡೆದಿರುವ ಭರತ್ ಕೊಲೆ ಪ್ರಕರಣ ಸೇರಿದಂತೆ ಮೂರು ದಿನಗಳಲ್ಲಿ ರೌಡಿಗಳ ಕಾಳಗದಲ್ಲಿ ಮೂವರು ಮೃತರಾಗಿದ್ದಾರೆ. ಆಗಸ್ಟ್ 24ರಂದು ಸಂಜೆ ನಾಯಂಡಹಳ್ಳಿಯ ಸಾಯಿ ಕಾಂಪ್ಲೆಕ್ಸ್ ಎದುರು ಚಂದ್ರಲೇಔಟ್ ಠಾಣೆಯ ರೌಡಿಶೀಟರ್ ಅರ್ಜುನ್ ಅಲಿಯಾಸ್ ತಟ್ಟೆ (32) ಎಂಬಾತನನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದರು. ಆಗಸ್ಟ್ 26ರಂದು ಸಂಜೆ ಬಾಹುಬಲಿ ನಗರದಲ್ಲಿ ಗಂಗಮ್ಮನಗುಡಿ ಪೊಲೀಸ್ ಠಾಣೆಯ ರೌಡಿ ಶೀಟರ್ ಮೋನಿ ಅಲಿಯಾಸ್ ಮೋಹನ್ಕುಮಾರ್ ಎಂಬಾತನನ್ನು ಕೊಲೆ ಮಾಡಲಾಗಿತ್ತು.
Advertisement