Advertisement

ಮನೆಗೆಲಸದ ಯುವತಿ ಉದ್ಯಮಿ ಮನೆಯಲ್ಲಿ ಕೊಲೆ?

11:08 AM Jan 13, 2017 | Team Udayavani |

ಮಹದೇವಪುರ: ಮನೆಕೆಲಸದ ಯುವತಿಯೊಬ್ಬಳು ಕೆಲಸ ಮಾಡುವ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನ ಪ್ಪಿದ್ದು ಮನೆ ಮಾಲೀಕನೇ ಕೊಲೆ ಮಾಡಿರಬಹುದೆಂದು ಪೋಷಕರು ಆರೋಪಿಸಿದ್ದಾರೆ. ಜಾರ್ಖಂಡ್‌ ಮೂಲದ ಖುಷ್ಬು (18) ಸಾವನ್ನಪ್ಪಿರುವ ಯುವತಿ.

Advertisement

ಕಳೆದ 6 ತಿಂಗಳಿಂದ ಗರುಡಾಚಾರ್‌ಪಾಳ್ಯದಲ್ಲಿರುವ ಪುರವಂಕರ ವಿಲ್ಲಾಗಳಲ್ಲಿನ ಮನೋಜ್‌ ಶರ್ಮ ಎಂಬ ಉದ್ಯಮಿಯ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಳು. ಉದ್ಯಮಿ ಮನೆಯಲ್ಲೇ ಆಕೆ ರಾತ್ರಿ ಯೂ ಮಲಗುತ್ತಿದ್ದಳು. ಮನೆಯಲ್ಲಿ ಕೆಲಸಕ್ಕೆ ಸೇರಿದಾಗಿಲಿನಿಂದಲೂ ಮಾಲೀಕ ಕಿರುಕುಳ ನೀಡುತ್ತಿದ್ದ ಎಂದು ಸಾವನ್ನಪ್ಪಿರುವ ಖುಷ್ಬು ಪೊಷಕರಿಗೆ ಹೇಳಿದ್ದಳು.

ಈ ಬಗ್ಗೆ ಕೆಲವು ಬಾರಿ ಮನೆ ಮಾಲೀಕನ ಬಳಿಯೂ ಪೋಷಕರು ಹೋಗಿ ಹೇಳಿದ್ದರು. ಈಗ ಮನೆ ಮಾಲೀಕನೆ ಕೊಲೆ ಮಾಡಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವಂತೆ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next