Advertisement

Siddapura ಅಪಘಾತದ ಚಿತ್ರಣ ಬಿಂಬಿಸಿ ವ್ಯಕ್ತಿಯ ಕೊಲೆ?

11:19 PM Dec 01, 2023 | Team Udayavani |

ಸಿದ್ದಾಪುರ: ಆಜ್ರಿ ಗ್ರಾಮದ ಗೋರಿಜೆಡ್ಡು ಎಂಬಲ್ಲಿ ಬೈಕ್‌ ಅಪಘಾತವಾಗಿ ಮೃತಪಟ್ಟ ರೀತಿಯಲ್ಲಿ ಹಳ್ಳಿಹೊಳೆ ಮಂಜುನಾಥ (36) ಅವರ ಶರೀರವು ನ. 30ರಂದು ಪತ್ತೆಯಾಗಿದೆ.

Advertisement

ಘಟನ ಸ್ಥಳವನ್ನು ಮೇಲ್ನೋಟಕ್ಕೆ ಗಮನಿಸಿದಾಗ ಇದೊಂದು ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಪಕ್ಕದಲ್ಲಿ ಬೈಕ್‌ ಅಪಘಾತವಾದ ಸ್ಥಿತಿಯಲ್ಲಿ ಬಿದ್ದಿದ್ದು, ಹೆಲ್ಮೆಟ್‌ಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿಲ್ಲ. ಮೃತ ಮಂಜುನಾಥ ಅವರ ಬಲ ಕಣ್ಣಿನ ಹಣೆಯ ಮೇಲೆ ಆಯುಧದಿಂದ ತಿವಿದ ಸ್ವರೂಪದ ಆಳವಾದ ಗಾಯವಾಗಿದೆ.

ಮೃತ ಶರೀರದ ಬಳಿ ಒಂದು ಜತೆ ಶೂ ಕೂಡ ಪತ್ತೆಯಾಗಿದೆ. ಸ್ಥಳದಲ್ಲಿ ರಕ್ತಸಿಕ್ತ ಹೆಜ್ಜೆ ಗುರುತುಗಳು ಇದ್ದು, ಅಪಘಾತದ ಬಗ್ಗೆ ಸಂಶಯ ಇದೆ ಎಂದು ಸಹೋದರ ಸತೀಶ (33) ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next