Advertisement

ದೇಶದ ತುಂಬಾ ಮೋದಿ ಅಲೆ: ಸವದಿ

03:40 PM Apr 11, 2019 | Team Udayavani |
ಕೋಹಳ್ಳಿ: ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಠಾಚಾರ ಮುಕ್ತ ಆಡಳಿತ ನೀಡಿದ್ದು, ದೇಶದ ತುಂಬ ಮೋದಿ ಅಲೆ ಜೋರಾಗಿದೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ದೇಶದಲ್ಲಿ 65 ವರ್ಷಗಳಲ್ಲಾಗದ ಅಭಿವೃದ್ಧಿಯನ್ನು ಕೇವಲ 5 ವರ್ಷಗಳಲ್ಲಿ ಹಲವಾರು ಜನಪರ ಯೋಜನೆಗಳನ್ನು ನೀಡಿರುವ ಪ್ರಧಾನಿ ಮೋದಿ ಭಾರತ ಹಾಗೂ ಇತರ ದೇಶಗಳಿಗೆ ಮಾದರಿಯಾಗಿದ್ದಾರೆ.
ರಾಷ್ಟೀಕೃತ ಬ್ಯಾಂಕಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ 1 ಲಕ್ಷ ರೂ.ಗಳವರೆಗೆ ಅಲ್ಪಾವಧಿ ಸಾಲ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿರುವ ಎಲ್ಲವನ್ನು ದೇಶದ ಜನರಿಗೆ ನೀಡಲಿದ್ದಾರೆ. ಆದ್ದರಿಂದ ಮೋದಿ ಕೈ ಬಲ ಪಡಿಸಲು ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಮತ ನೀಡಬೇಕು ಎಂದರು.
ಈ ವೇಳೆ ಅಣ್ಣಾಸಾಬ ನಾಯಿಕ, ಸಂಗಯ್ನಾ ಪೂಜಾರಿ, ಅಶೋಕ ಕೊಡಗ, ಉಮ್ಮಯ್ನಾ ಪೂಜಾರಿ, ಎಸ್‌.ಎಲ್‌. ಪೂಜಾರಿ, ಭೀಮಯ್ನಾ ಪೂಜಾರಿ, ನಾರಾಯಣ ಸೂರ್ಯವಂಶಿ, ಗುರಲಿಂಗ ಝರೆ, ಶಂಕರ ಪೂಜಾರಿ, ಮಲ್ಲಪ್ಪ ಉಮರಾಣಿ, ಶಾಮು ಕುಂಬಾರ, ಈರಸಂಗೌಡ ಪಾಟೀಲ, ವಿಕಾಸ ಗುರಪ್ಪಗೋಳ, ದುಂಡಪ್ಪ ಬಾಡಗಿ ಸೇರಿದಂತೆ ಇತರರು ಇದ್ದರು.
ಮೋದಿ ಪ್ರಧಾನಿಯಾದರೆ ಮಾತ್ರ ಉತ್ತಮ ಭವಿಷ್ಯ
ತೆಲಸಂಗ: ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾದರೆ ಮಾತ್ರ ದೇಶಕ್ಕೆ ಉತ್ತಮ ಭವಿಷ್ಯವಿದ್ದು, ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಯವರನ್ನು ಆಯ್ಕೆ ಮಾಡುವ ಮೂಲಕ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸಿದ ಬಾಗ್ಯ ನಮ್ಮದಾಗಿಸಿಕೊಳ್ಳೋಣ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಕರೆ ನೀಡಿದರು. ಬುಧವಾರ ಸಮೀಪದ ಕಕಮರಿ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ ನಡೆಸಿ ಮಾತನಾಡಿ, ಮೋದಿ ಆಯ್ಕೆ ಮಾಡಿ ಮತದಾರರು ಪ್ರಜ್ಞಾವಂತರು ಎನ್ನುವ ಸಂದೇಶ ನೀಡಬೇಕೆಂದರು. ಐದು ವರ್ಷಗಳ ಹಿಂದೆ ಕಾಣಿಸಿಕೊಂಡವರು ಮತ್ತೆ ಚುನಾವಣೆಯಲ್ಲಿಯೇ ಪ್ರತ್ಯಕ್ಷರಾಗಿದ್ದಾರೆ ಇಂತವರಿಗೆ ಮೋದಿ ಆಯ್ಕೆಯೇ ಉತ್ತರವಾಗಬೇಕು ಎಂದರು.
Advertisement

Udayavani is now on Telegram. Click here to join our channel and stay updated with the latest news.

Next