Advertisement
ಪಟ್ಟಣದ ಸ್ಮಯೋರ್ ಗಣಿಕಂಪನಿ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಗಣಿ ಪರಿಸರ ಮತ್ತು ಪರಿಸರ ಸಪ್ತಾಹದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಪ್ತಾಹದ ಮುಖ್ಯ ಉದ್ದೇಶ ಪರಿಸರ ಸಂರಕ್ಷಣೆಯೊಂದಿಗೆ ಉತ್ತಮ ಗಣಿಗಾರಿಕೆ ಮಾಡುವುದಾಗಿದೆ. ಅಲ್ಲದೆ, ಎಂ.ವೈ. ಘೋರ್ಪಡೆಯವರು ಈ ಹಿಂದೆ ಸಾಮಾಜಿಕ ಮೌಲ್ಯಗಳೊಂದಿಗೆ ಗಣಿಗಾರಿಕೆ ನಡೆಸಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.
ಸರಿಯಾದ ಲೆಕ್ಕಾಚಾರ, ಉತ್ತಮ ಅಭಿವೃದ್ಧಿಗೆ ನಾಂದಿಯಾಗುತ್ತದೆ ಎಂದು ತಿಳಿಸಿದರು.
Related Articles
Advertisement
ಯಾವುದೇ ಕಾರಣಕ್ಕೂ ಗಣಿಗಾರಿಕೆಯನ್ನು ನಾವು ಕಡೆಗಣಿಸುವಂತಿಲ್ಲ. ಹರಪ್ಪಾ, ಮೆಹಂಜೋದಾರ್ ದಿಂದಲೂ ಇದೆ. ಅದರಲ್ಲಿ ಭಾರತ ಜಗತ್ತಿನಲ್ಲಿಯೇ ಅತಿ ಹೆಚ್ಚು ಹಾಗೂ ಉತ್ತಮ ಗಣಿಗಾರಿಕೆಗೆ ಪ್ರಸಿದ್ಧಿಯಾಗಿದೆ. ಮುಂದಿನ ಆರ್ಥಿಕ ವರ್ಷಗಳಲ್ಲಿ ಗಣಿಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿಂದೆ 11 ಫೈಸ್ಟಾರ್ ಗಣಿಗಳು ಇದ್ದವು. 6 ಫೋರ್ ಸ್ಟಾರ್ ಇದ್ದವು. ಆದರೆ ಇಂದು ಹೆಚ್ಚಿವೆ. ದೇಶದಲ್ಲಿ 58ಕ್ಕೂ ಹೆಚ್ಚು ಕಂಪನಿಗಳು ಉತ್ತಮ ಗುಣಮಟ್ಟದ ಉತ್ಪಾದನೆಗೆ ನಾಂದಿಯಾಡಿವೆ. ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡಿ ದೇಶದ ಅಭಿವೃದ್ಧಿಗೆ ನಾಂದಿಯಾಡೋಣ ಎಂದರು.
ಸ್ಮಯೋರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನಾಜೀಮ್ ಶೇಖ್, ಸ್ಮಯೋರ್ ಕಂಪನಿಯ ಛರನ್ ಎಸ್. ವೈ.ಘೋರ್ಪಡೆ, ಕಂಟ್ರೋಲರ್ ಆಫ್ ಮೈನ್ಸ್ ಜೆ.ಆರ್. ಚೌದರಿ, ರಿಜಿನಲ್ ಕಂಟ್ರೋಲರ್ ಆಫ್ ಮೈನ್ಸ್ ಜಿ.ಸಿ. ಮೀನಾ, ಎಂ.ಡಿ. ಅಬ್ದುಲ್ ಸಲೀಂ, ಅರುಣ್ಕುಮಾರ್, ವಿ.ಜಯಪ್ರಕಾಶ್, ಶ್ರೀಧರ ಹೆಗಡೆ ಇನ್ನಿತರರಿದ್ದರು.