Advertisement

ಕೃಷ್ಣರಾವ್‌ ಉದ್ಯಾನ ಅಭಿವೃದ್ಧಿಗೆ 3 ಕೋಟಿ ಮೇಯರ್‌ ಭರವಸೆ

11:58 AM Jan 18, 2017 | Team Udayavani |

ಬೆಂಗಳೂರು: ಬಸವನಗುಡಿಯ ಕೃಷ್ಣರಾವ್‌ ಉದ್ಯಾನವನ ಹಾಗೂ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿಗೆ ತಮ್ಮ ನಿಧಿಯಿಂದ 3 ಕೋಟಿ ರೂ. ಅನುದಾನ ನೀಡುವುದಾಗಿ ಮೇಯರ್‌ ಜಿ.ಪದ್ಮಾವತಿ ಭರವಸೆ ನೀಡಿದ್ದಾರೆ. 

Advertisement

ಮಂಗಳವಾರ ಈ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸುಮಾರು 25 ಎಕರೆ ಪ್ರದೇಶದಲ್ಲಿರುವ ಕೃಷ್ಣರಾವ್‌ ಉದ್ಯಾನವನದಲ್ಲಿ ಸೂಕ್ತ ವಿದ್ಯುತ್‌ ದೀಪ, ಕುಡಿಯುವ ನೀರು ಹಾಗೂ ಸುಸಜ್ಜಿತ ಗ್ರಂಥಾಲಯ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ತಮ್ಮ ನಿಧಿಯಿಂದ ಆದಷ್ಟು ಬೇಗ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು.

ನಂತರ ಉದ್ಯಾನವನದ ಆವರಣದ ಬ್ಯಾಸ್ಕೆಟ್‌ ಬಾಲ್‌ ಕ್ರೀಡಾಂಗಣ ಉದ್ಘಾಟಿಸಿದ ಮೇಯರ್‌, ವಾಯು ವಿಹಾರಕ್ಕೆ ಆಗಮಿಸಿದ್ದ ಸಾರ್ವ ಜನಿಕರಿಂದ ಅಹವಾಲು ಆಲಿಸಿದರು.  ಈ ಸಂದರ್ಭದಲ್ಲಿ ಶಾಸಕ ಆರ್‌.ವಿ.ದೇವರಾಜ್‌ ಉದ್ಯಾನವನದಲ್ಲಿ ಪಾದಾಚಾರಿ ಮಾರ್ಗ ನಿರ್ಮಾಣ ಹಾಗೂ ಜಿಮ್‌ ಸ್ಥಾಪನೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next