Advertisement

ಶಾಸಕ ಸಂಗಮೇಶ್ ಸದನ ಪ್ರವೇಶಕ್ಕೆ ಮಾರ್ಷಲ್ ಗಳ ತಡೆ: ಸಿದ್ದರಾಮಯ್ಯ ತರಾಟೆ!

05:05 PM Mar 04, 2021 | Team Udayavani |

ಬೆಂಗಳೂರು :  ಅಮಾನತ್ತಾಗಿರುವ ಭದ್ರಾವತಿ ಶಾಸಕ ಸಂಗಮೇಶ್ ಸದನಕ್ಕೆ ತೆರಳುತ್ತಿದ್ದ ವೇಳೆ ಮಾರ್ಷಲ್‍ಗಳು ತಡೆದಿರುವ ಘಟನೆ ನಡೆದಿದೆ. ಮಾರ್ಷಲ್ ಗಳು ತಡೆಯುತ್ತಿದ್ದಂತೆ, ಅಮಾನತು ಆದೇಶ ಪ್ರತಿ ತೋರಿಸುವಂತೆ ಸಂಗಮೇಶ್ ಕೇಳಿದ್ದಾರೆ.

Advertisement

ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಎಂಟ್ರಿ ಕೊಟ್ಟು ಸಂಗಮೇಶ್ ರನ್ನು ಸದನದ ಒಳಗೆ ಕರೆದುಕೊಂಡು ಹೋಗಿದ್ದಾರೆ.

ಇದಾದ ನಂತ್ರ ಮಾರ್ಷಲ್‍ ಗಳ ಮೇಲೆ ಗರಂ ಆದ ಸಿದ್ದರಾಮಯ್ಯ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ದಬ್ಬಾಳಿಕೆ ಮಾಡುತ್ತಿದ್ದೀರಾ ಎಂದು ಅವಾಜ್ ಹಾಕಿದ್ದಾರೆ.

ಈ ವೇಳೆ ಮಾರ್ಷಲ್ ಗಳು ಸಿದ್ದರಾಮಯ್ಯರನ್ನೂ ತಡೆಯಲು ಮುಂದಾದಾಗ ಸರಿಯಯ್ಯಾ ಎಂದು ಅವಾಜ್ ಹಾಕಿ ಸಂಗಮೇಶ್ ರನ್ನು ಒಳಗೆ ಕರೆದುಕೊಂಡು ಹೋಗಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next