ಲೇರಿದೆ. ಸಿಬಿಐ ನಿರ್ದೇಶಕರ ಆಯ್ಕೆ ಸಮಿತಿಯಲ್ಲಿದ್ದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ಸುಪ್ರೀಂ ಕದ ಬಡಿದಿದ್ದಾರೆ. ಕೇಂದ್ರ ಸರಕಾರದ ಈ ಏಕಪಕ್ಷೀಯ ನಿರ್ಧಾರ ಅಕ್ರಮ ಎಂದು ಖರ್ಗೆ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರ ಅಥವಾ ವಿಚಕ್ಷಣ ದಳ ತಮ್ಮ ವ್ಯಾಪ್ತಿ ಮೀರಿ ಈ ನಿರ್ಧಾರಕ್ಕೆ ಬಂದಿವೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. ರಫೇಲ್ ಡೀಲ್ ಸಂಬಂಧ ಅವರು ತನಿಖೆಗೆ ಸಿದ್ಧರಾಗುತ್ತಿರುವಾಗಲೇ ಈ ನಿರ್ಧಾರ ತೆಗೆದು ಕೊಳ್ಳಲಾಗಿದೆ ಎಂದೂ ಆರೋಪಿಸಿದ್ದಾರೆ.
Advertisement
ಕೇಂದ್ರ ಸರಕಾರದ ಕ್ರಮ ನಿರಂಕುಶ, ಅಕ್ರಮ ಎಂದಿರುವ ಖರ್ಗೆ, ಪ್ರಮುಖ ಪ್ರಕರಣಕ್ಕಾಗಿ ಸಿದ್ಧವಾಗುತ್ತಿದ್ದ ಹಾಲಿ ನಿರ್ದೇಶಕ ರನ್ನು ಅಸಾಧಾರಣ ಪರಿಸ್ಥಿತಿಯಲ್ಲಿ ಆಯ್ಕೆ ಸಮಿತಿಯ ಒಪ್ಪಿಗೆ ಪಡೆಯದೆ ರಜೆಯಲ್ಲಿ ಕಳು ಹಿಸಲಾಗಿದೆ ಎಂದೂ ಅರ್ಜಿಯಲ್ಲಿ ಪ್ರಸ್ತಾವಿಸಿ ದ್ದಾರೆ. ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸುವಾಗ ಆಯ್ಕೆ ಸಮಿತಿಯ ಗಮನಕ್ಕೆ ತಂದಿಲ್ಲ ಎಂದು ಆಕ್ಷೇಪಿಸಿದ್ದಾರೆ.
ಈ ನಡುವೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಒಳಗೊಂಡ ಲಂಚ ಪ್ರಕರಣದಲ್ಲಿ ಬಂಧಿತನಾಗಿರುವ ಮಧ್ಯವರ್ತಿ ಮನೋಜ್ ಪ್ರಸಾದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದಿಲ್ಲಿ ಕೋರ್ಟ್ ನಿರಾಕರಿಸಿದೆ.