Advertisement

ಆಲೂರು : ಬಲೆಗೆ ಬಿದ್ದ ಗಂಡು ಚಿರತೆ

12:50 AM Feb 23, 2019 | Team Udayavani |

ಕುಂದಾಪುರ: ಆಲೂರು ಗ್ರಾಮದ ಹುಯ್ಯಾಣ ಎನ್ನುವಲ್ಲಿ ಊರವರು ಮತ್ತು ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 9ರ ಹರೆಯದ ಗಂಡು ಚಿರತೆಯೊಂದು ಬಲೆಗೆ ಬಿದ್ದಿದೆ. 

Advertisement

ಇಲ್ಲಿನ ಪೊದೆಯೊಂದರಲ್ಲಿ ಅವಿತು ಕೊಂಡಿರುತ್ತಿದ್ದ ಚಿರತೆ ಪೊದೆ ಸಮೀಪದ ತಂತಿ ಬೇಲಿಗೆ ಸಿಲುಕಿದ್ದು ಅದನ್ನು ಸ್ಥಳೀಯರು ಕಂಡು ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

ತಂತಿ ಬೇಲಿಗೆ ಹೊಂದಿಕೊಂಡು ಸುತ್ತಲೂ ಬಲೆ ಹಾಕಿ ತಂತಿ ಅಗಲಿಸಿ ಚಿರತೆ ಹೊರಬರಲು ಅನುವು ಮಾಡಿಕೊಟ್ಟು ಸೆರೆ ಹಿಡಿದು ಸುರಕ್ಷಿತವಾಗಿ ಬೇರೆಡೆಗೆ ಬಿಡಲಾಗಿದೆ. 

ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್‌, ಡಿಆರ್‌ಎಫ್‌ಗಳಾದ ಆಲೂರಿನ ದಿಲೀಪ್‌, ಕುಂದಾಪುರದ ಉದಯ, ನೇರಳಕಟ್ಟೆಯ ಹೇಮಾ, ಸಿಬಂದಿಯಾದ ಉದಯ, ಮಂಜುನಾಥ್‌, ಬಸವರಾಜು, ಹರಿಪ್ರಸಾದ್‌, ಚಾಲಕ ಅಶೋಕ್‌ ಹಾಗೂ ಸ್ಥಳೀಯರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next