Advertisement
ಚಿತ್ರಕ್ಕೆ ಕನ್ನಡಿಗ, ದುಬೈನ ಪ್ರಸಿದ್ಧ ಉದ್ಯಮಿ, ಯುಎಇ ಎಕ್ಸ್ಚೇಂಜ್ ಮತ್ತು ಎನ್ಎಂಸಿ ಹೆಲ್ತ್ಕೇರ್ನ ಸ್ಥಾಪಕ ಮತ್ತು ಅಧ್ಯಕ್ಷ ಬಿ.ಆರ್. ಶೆಟ್ಟಿ ಅವರು ಹಣ ಹಾಕಲಿದ್ದು, ಮಲೆಯಾಳಂನ ಶ್ರೇಷ್ಟ ನಿರ್ದೇಶಕ ವಿ.ಎ. ಶ್ರೀಕುಮಾರನ್ ಮೆನನ್ ನಿರ್ದೇಶಿಸಲಿದ್ದಾರೆ. ಈ ಚಿತ್ರಕ್ಕೆ ಮಲೆಯಾಳಂನ ಜ್ಞಾನಪೀಠ ಪುರಸ್ಕೃತ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ ಅವರ ಕಥೆಯನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ.
Related Articles
Advertisement
ಎಂ.ಟಿ. ವಾಸುದೇವನ್ ನಾಯರ್ ಅವರ ಭೀಮನನ್ನು ಪ್ರಮುಖವಾಗಿ ಚಿತ್ರಿಸಿರುವಂಥ “ರಂಡಮೋಳಮ್'(ದಿ ಸೆಕೆಂಡ್ ಟರ್ನ್)ಕಾದಂಬರಿಯನ್ನು ಆಧರಿಸಿ ಈ ಚಿತ್ರ ತಯಾರಿಸಲಾಗುತ್ತಿದೆ. ಇಷ್ಟೇ ಅಲ್ಲದೇ, ಇವರೇ ಚಿತ್ರಕ್ಕೆ ಚಿತ್ರಕಥೆಯನ್ನೂ ಬರೆಯಲಿದ್ದಾರೆ. ವಿಶೇಷವೆಂದರೆ, ಚಿತ್ರಕಥೆ ವಿಚಾರದಲ್ಲಿ ಭಾರತದ ಸಿನಿಮಾ ಇತಿಹಾಸದಲ್ಲೇ ಇವರಿಗೇ ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ.
ಹಿಂದೆಯೂ ಹಲವಾರು ಭಾರಿ ಮಹಾಭಾರತವನ್ನು ಬೆಳ್ಳಿತೆರೆಗೆ ತರಲು ಬಹಳಷ್ಟು ಮಂದಿ ಪ್ರಯತ್ನಿಸಿದ್ದಾರೆ. ಆದರೆ ಇದರಲ್ಲಿ ಯಶಸ್ಸು ಸಿಕ್ಕಿರುವುದು ವಿರಳ. ಇದಕ್ಕೆ ಕಾರಣ, ಇದೊಂದು ಸುದೀರ್ಘ ಕಥೆಯಾಗಿರುವುದು. ಆದರೆ ಆಧುನಿಕ ಕಾಲಘಟ್ಟದಲ್ಲಿ ಭಾರಿ ಪ್ರಮಾಣದ ಹಣ ಹಾಕಿ, ಚಿತ್ರ ನಿರ್ಮಿಸಲು ಹೊರಟಿರುವುದು ಇದೇ ಮೊದಲ ಬಾರಿ ಎಂದು ಹೇಳಬಹುದು.
ಬಿ.ಆರ್. ಶೆಟ್ಟಿ ಅವರು, ಜಾಗತಿಕ ಮಟ್ಟದ ಪ್ರೇಕ್ಷಕರಿಗಾಗಿ ರಂಡಮೋಳಮ್ ಕಾದಂಬರಿಯ ಹೂರಣವನ್ನು ಗುರುತಿಸಿ ಚಿತ್ರ ಮಾಡುತ್ತಿರುವ ವಿಚಾರ ನನಗೆ ಖುಷಿ ತಂದಿದೆ.– ಎಂ.ಟಿ. ವಾಸುದೇವನ್ ನಾಯರ್, ಜ್ಞಾನಪೀಠ ಪುರಸ್ಕೃತ ಸಾಹಿತಿ ಅತ್ಯಂತ ಉತ್ಕೃಷ್ಟ ನಿರ್ಮಾಣ ಮತ್ತು ದೃಶ್ಯದ ಶ್ರೀಮಂತಿಕೆಯ ಜತೆಗೆ ನಿರೂಪಣೆಯಲ್ಲೂ ಮಾಂತ್ರಿಕತೆ ಸೃಷ್ಟಿಸಿ ಚಿತ್ರವನ್ನು ನಿರ್ಮಾಣ ಮಾಡುತ್ತೇವೆ.
– ಶ್ರೀಕುಮಾರ್ ಮೆನನ್, ನಿರ್ದೇಶಕ – ಕನ್ನಡ, ಮಲೆಯಾಳಂ, ಇಂಗ್ಲಿಷ್, ಹಿಂದಿ, ತಮಿಳು, ತೆಲಗು ಭಾಷೆಯಲ್ಲಿ ನಿರ್ಮಾಣ
– ಚಿತ್ರಕ್ಕೆ ಕನ್ನಡಿಗ ಬಿ.ಆರ್. ಶೆಟ್ಟಿ ಅವರಿಂದ ಹಣ ಹೂಡಿಕೆ
– ಮಲಯಾಳಂನ ಜ್ಞಾನಪೀಠ ಪುರಸ್ಕೃತ ಸಾಹಿತಿ ಎಂ.ಟಿ. ವಾಸುದೇವನ್ ಕಥೆ ಆಧರಿತ
– ವಿ.ಎ. ಶ್ರೀಕುಮಾರನ್ ನಿರ್ದೇಶನದಲ್ಲಿ ಮೂಡಿಬರಲಿದೆ ಸಿನಿಮಾ
– 2018ರ ಸೆಪ್ಟೆಂಬರ್ನಿಂದ ನಿರ್ಮಾಣ ಶುರು, 2020ಕ್ಕೆ ರಿಲೀಸ್
– ಎರಡು ಭಾಗಗಳಲ್ಲಿ ಬರಲಿದೆ ಅದ್ಧೂರಿ ಸಿನಿಮಾ
– ಮೊದಲನೇ ಭಾಗ ರಿಲೀಸ್ ಆದ 90 ದಿನಗಳಲ್ಲೇ 2ನೇ ಭಾಗವೂ ಬಿಡುಗಡೆ