Advertisement

ಬಿಜೆಪಿಯಿಂದ ಜನರ ಬದುಕು ಬರ್ಬರ

02:33 PM May 30, 2022 | Team Udayavani |

ಮುಂಡರಗಿ: ರೈತರು, ಯುವಕರು, ಕೂಲಿಕಾರ್ಮಿಕರಿಗೆ ಹಾಗೂ ಎಲ್ಲಾ ವರ್ಗದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವುದರ ಜೊತೆಗೆ ಅಂಬೇಡ್ಕರ್‌ ಬರೆದ ಸಂವಿಧಾನಕ್ಕೆ ಚ್ಯುತಿ ಬಾರದಂತೆ ದೇಶ ಕಟ್ಟುವ ಕೆಲಸವನ್ನು ಕಾಂಗ್ರೆಸ್‌ ಪಕ್ಷ ಮಾಡಿದೆ. ಆದರೆ, ಬಿಜೆಪಿ ಸಂವಿಧಾನ ವಿರೋಧಿ ಕೃತ್ಯಗಳಲ್ಲಿ ತೊಡಗಿ ಸಮಾಜದಲ್ಲಿನ ಸಾಮರಸ್ಯಕ್ಕೆ ಧಕ್ಕೆ ತರುತ್ತಿದೆ. ಬಿಜೆಪಿ ದುಬಾರಿ ಜೀವನಕ್ಕೆ ಎಡೆ ಮಾಡಿಕೊಟ್ಟು ಜನಸಾಮಾನ್ಯರ ಬದುಕು ಬರ್ಬರವಾಗುವಂತೆ ಮಾಡಿದೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌ .ಪಾಟೀಲ್‌ ಆರೋಪಿಸಿದರು.

Advertisement

ತಾಲೂಕಿನ ಡಂಬಳ ಗ್ರಾಮದ ತೋಂಟದಾರ್ಯ ಕಲಾಭವನದ ಆವರಣದಲ್ಲಿ ಮುಂಡರಗಿ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯದಲ್ಲಿ ಪಕ್ಷ 75 ಲಕ್ಷ ಸದಸ್ಯರ ಸದಸ್ಯತ್ವ ಹೊಂದಿದೆ. ಪ್ರತಿ ಬೂತ್‌ ಮಟ್ಟದಲ್ಲಿ ಜೂ.10ರೊಗಳಗೆ ಪದಾಧಿಕಾರಿಗಳು 25 ಸದಸ್ಯರನ್ನು ನೇಮಕ ಮಾಡಬೇಕು. ಹಿಂದೂ, ಮುಸ್ಲಿ ಎನ್ನದೆ ಯಾವುದೇ ಸಮಾಜಕ್ಕೆ ಧಕ್ಕೆ ಬಂದಾಗ ಅವರ ಪರ ಕಾಂಗ್ರೆಸ್‌ ಪಕ್ಷ ಗಟ್ಟಿಯಾಗಿ ನಿಲ್ಲುವುದರ ಮೂಲಕ ದೇಶದಲ್ಲಿ ಸಮಾನತೆಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಿದೆ. ಸಿಂಗಟಾಲೂರ ಏತ ನೀರಾವರಿಯೊಂದಿಗೆ ಪ್ರತಿ ಹಳ್ಳಿಯ ಕೆರೆಗಳನ್ನು ತುಂಬಿಸುವುದರ ಮೂಲಕ ಈ ಭಾಗದ ರೈತರನ್ನು ಆರ್ಥಿಕವಾಗಿ ಸ್ಥಿತಿವಂತರನ್ನಾಗಿ ಮಾಡಿದ ಶ್ರೇಯಸ್ಸು ಕಾಂಗ್ರೆಸ್‌ ಪಕ್ಷದ್ದಾಗಿದೆ. ಆದರೆ, 2 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದ ಬಿಜೆಪಿ, ಇವತ್ತು ಆಡಳಿತದ ವೈಫಲ್ಯದಿಂದಾಗಿ ಶೇ.35 ರಷ್ಟು ಉದ್ಯೋಗವನ್ನು ಕಳೆಕೊಳ್ಳುವಂತಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ, ಗ್ಯಾಸ್‌, ಪೆಟ್ರೋಲ್‌, ಡೀಸೆಲ್‌, ಮನೆ ಬಳಕೆ ವಸ್ತುಗಳು ಗಗನಕ್ಕೇರುವಂತೆ ಮಾಡಿರುವುದೇ ಬಿಜೆಪಿ ಪಕ್ಷದ ಸಾಧನೆಯಾಗಿದೆ ಎಂದು ದೂರಿದರು.

ಸಹಕಾರ ವಿಭಾಗದ ಕೋ-ಚೇರ್ಮನ್‌ ಶಿವಕುಮಾರಗೌಡ ಪಾಟೀಲ್‌ ಮಾತನಾಡಿ, ಬಿಜೆಪಿ ಆಡಳಿತದ ವಿಫಲತೆಯಿಂದ ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರುವಂತಾಗಿ, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ನಿಜವಾದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಹಾಗೆ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ, ವಿಶ್ವವಿದ್ಯಾಲಯ ನೇಮಕಾತಿಯಲ್ಲಿ ಭ್ರಷ್ಟಾಚಾರ, ಗುತ್ತಿಗೆದಾರರಿಂದ ಕಮಿಷನ್‌ ಹಣಕ್ಕಾಗಿ ಬೇಡಿಕೆ ಹೀಗೆ ಭ್ರಷ್ಟಾಚಾರವನ್ನೇ ಹೊದ್ದು ಮಲಗಿರುವುದು ಬಿಜೆಪಿ ಸಾಧನೆಯಾಗಿದೆ. ಇದನ್ನು ನೋಡುತ್ತಿರುವ ಜನತೆ ಮುಂದಿನ ದಿನಮಾನಗಳಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

Advertisement

ಸುಜಾತಾ ದೊಡ್ಡಮನಿ, ನಾಗರಾಜ ಗುರಿಕಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿ.ಆರ್‌. ಗುಡಿಸಾಗರ, ರಾಮಚಂದ್ರ ಕಲಾಲ, ಐ.ಎಸ್‌ .ಪೂಜಾರ, ಬಸವರಾಜ ಮುಂಡವಾಡ, ರುದ್ರಗೌಡ ಪಾಟೀಲ್‌, ಎಸ್‌.ಡಿ.ಮಕಾಂದಾರ, ನೀಲಮ್ಮ ಬೋಳನ್ನವರ, ಕುಮಾರಸ್ವಾಮಿ ಹಿರೇಮಠ, ಜ್ಯೋತಿ ಕುರಿಯವರ, ಶೋಭಾ ಮೇಟಿ, ಮಹೇಶ ಕೋರ್ಲಹಳ್ಳಿ, ಹೇಮಂತಗೌಡ ಪಾಟೀಲ್‌, ವಿ.ಟಿ.ಮೇಟಿ, ಮರಿಯಪ್ಪ ಸಿದ್ದಣ್ಣವರ, ಜಾಕೀರ ಮೂಲಿಮನಿ, ಬಸುರಡ್ಡಿ ಬಂಡಿಹಾಳ, ಅಶೋಕ ಹಡಪದ, ಪುಲಿಕೇಶಗೌಡ, ಮಹೇಶ ಹೋಳೆಯಾಚಿ, ಅಮರಗೋಳ ಹಾಲನಗೌಡ, ಅಮರೇಶ ಹಿರೇಮಠ, ಯಲ್ಲಪ್ಪಗೌಡ ಕರಿಮುಡಿ, ಸತ್ಯಪ್ಪ ಪೂಜಾರ, ಪ್ರಕಾಶ ಸಜ್ಜನರ, ನಾಗರಾಜ ಸಜ್ಜನರ, ಕಬೇರ ನಾಯಕ, ಗಣೇಶ ರಾಠೊಡ, ರವಿ ಜವಿ, ಪಕ್ಷದ ಕಾರ್ಯಕರ್ತರು ಇದ್ದರು. ವಿಶ್ವನಾಥ ಪಾಟೀಲ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next