ನಾನಂತೂ ಈ ಶಾಸಕರ ಪಟ್ಟಿಯಲ್ಲಿ ಇಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
Advertisement
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗ ನಡೆದಿರುವ ರಾಜಕೀಯ ಬೆಳವಣಿಗೆ ಗಮನಿಸಿದರೆ ಬಿಜೆಪಿ ನಾಯಕರು ಹೇಳುವಂತೆ 25 ಶಾಸಕರಂತೂ ಬಿಜೆಪಿಗೆ ಸೇರ್ಪಡೆಯಾಗುತ್ತಿಲ್ಲ. ಕಳೆದ ಆರು ತಿಂಗಳಿಂದ ಬಿಜೆಪಿ ನಾಯಕರು ಆಮಿಷ ಒಡ್ಡುತ್ತಲೇ ಇದ್ದಾರೆ. ಆಗಾಗ ಆಡಿಯೋ ಹಾಗೂ ವಿಡಿಯೋ ದಾಖಲೆ ಬಿಡುಗಡೆ ಮಾಡುತ್ತಲೇ ಇದ್ದಾರೆ. ಆದರೂ, ಇದುಯಶಸ್ವಿಯಾಗಿಲ್ಲ. ಈ ಬಾರಿಯೂ ಬಿಜೆಪಿ ಪ್ರಯತ್ನ ವಿಫಲವಾಗಲಿದೆ. ಹೀಗಾಗಿ, ಈ ರೀತಿಯ ಆಪರೇಷನ್ ಕಮಲಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯ ಇಲ್ಲ ಎಂದರು.
ಬೇಕು ಎಂಬುದು ನನ್ನ ಬೇಡಿಕೆ ಅಲ್ಲ. ಸಮ್ಮಿಶ್ರ ಸರ್ಕಾರ ಎಂದ ಮೇಲೆ ಅಸಮಾಧಾನ ಹಾಗೂ ಅತೃಪ್ತಿ ಇರುತ್ತದೆ. ಇದು ಸಹಜ. ಇದೇ ಕಾರಣದಿಂದ ಕೆಲವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸಿರಬಹುದು. ಇದರ ಮಾಹಿತಿ ನನಗೆ ಇಲ್ಲ. ಮೇಲಾಗಿ ನಾನು ದೂರು ನೀಡಿದವರ ಪರ ಇಲ್ಲ. ನಾನು ಕಾಂಗ್ರೆಸ್ಸಿಗ ಎಂದರು. ಗೋವಾದಲ್ಲಿ ಮದುವೆ ಮುಗಿಸಿಕೊಂಡು ಬರುವಾಗ ಖಾನಾಪುರ ತಾಲೂಕಿನ ಕಣಕುಂಬಿ ಬಳಿಯ ಸಾತವೇರಿ ರೆಸಾರ್ಟ್ಗೆ ಭೇಟಿ ನೀಡಿದ್ದೇನೆ ಅಷ್ಟೆ. ಅಲ್ಲಿಗೆ ಭೇಟಿ ನೀಡಿದ್ದು, ರೆಸಾರ್ಟ್ ರಾಜಕೀಯ ಮಾಡಲು ಅಲ್ಲ. ಮುಂದೆ ಪ್ರವಾಸಕ್ಕಾಗಿ ಬೇಕಾಗಬಹುದು ಎಂದು ನೋಡಿದ್ದೇನೆ ಅಷ್ಟೆ.
● ಸತೀಶ ಜಾರಕಿಹೊಳಿ, ಶಾಸಕ