Advertisement

ಚಿದು ವಿಚಾರಣೆಗೆ ಕಾನೂನು ಸಚಿವಾಲಯ ಅಸ್ತು

12:30 AM Feb 04, 2019 | |

ಹೊಸದಿಲ್ಲಿ: ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರಿಗೆ ಹೊಸದೊಂದು ಕಂಟಕ ಎದುರಾಗಿದೆ. ಐಎನ್‌ಎಕ್ಸ್‌ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರನ್ನು ವಿಚಾರಣೆ ನಡೆಸುವಂತೆ ಸಿಬಿಐಗೆ ಕೇಂದ್ರ ಕಾನೂನು ಸಚಿವಾಲಯ ಅನುಮತಿ ನೀಡಿದೆ.

Advertisement

ಹಗರಣ ಕುರಿತಂತೆ ಚಿದಂಬರಂ ವಿರುದ್ಧ ಸದ್ಯಕ್ಕೆ ಲಭ್ಯವಿರುವ ಎಲ್ಲ ಸಾûಾÂಧಾರಗಳನ್ನು ಕಲೆಹಾಕಿದ ಅನಂತರ, ಚಿದಂಬರಂ ವಿಚಾರಣೆಗೆ ಅನು ಮತಿ ನೀಡಬೇಕೆಂದು ಕಾನೂನು ಸಚಿವಾಲಯಕ್ಕೆ ಮನವಿ ಸಲ್ಲಿಸಿತ್ತು. ಇದಕ್ಕೆ ಸಚಿವಾಲಯ ಸಮ್ಮತಿ ಸಿದೆ ಎಂದು ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಚಿದಂಬರಂ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಆವಶ್ಯಕತೆಯಿದೆ ಎಂದು ಜ. 25ರಂದು ದಿಲ್ಲಿ ಹೈಕೋರ್ಟ್‌ಗೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ.) ತಿಳಿಸಿದ್ದನ್ನು ಇಲ್ಲಿ ಸ್ಮರಿಸ ಬಹುದು.

Advertisement

Udayavani is now on Telegram. Click here to join our channel and stay updated with the latest news.

Next