Advertisement

ಐದು ವರ್ಷ ಸುಳ್ಳು ಹೇಳುವುದರಲ್ಲೇ ಕಳೆದ ಮೋದಿ

11:45 AM Apr 09, 2019 | pallavi |
ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಲೇ ಐದು ವರ್ಷಗಳ ಭರವಸೆಯಲ್ಲಿ ಕಾಲ ಕಳೆದು ದೇಶದಲ್ಲಿ ದುರಾಡಳಿತ ನಡೆಸಿದರು. ಇದರಿಂದ ಜನ ಬೇಸತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲ ಆರೋಪಿಸಿದರು.
ತಾಲೂಕಿನ ತಿಮ್ಮಾಪುರದಲ್ಲಿ ಸೋಮವಾರ ಕಾಂಗ್ರೆಸ್‌ ಗ್ರಾಮೀಣ ಬ್ಲಾಕ್‌ ಸಮಿತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಅಧಿಕಾರಕ್ಕೂ ಬರುವ ಮುನ್ನ ನರೇಂದ್ರ ಮೋದಿ ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಸುಳ್ಳು ಹೇಳಿದರು. ನೋಟ್‌ ಬ್ಯಾನ್‌ ಮಾಡಿದರೆ ಭ್ರಷ್ಟಾಚಾರ ನಿಲ್ಲುತ್ತದೆ ಎಂದಿದ್ದರು. ಆದರೆ ಭ್ರಷ್ಟಾಚಾರ ಹೆಚ್ಚಿಸಿದರು.
ಪ್ರತಿಯೊಬ್ಬ ರ ಅಕೌಂಟ್‌ಗೆ 15ಲಕ್ಷ ಹಾಕುತ್ತೇನೆಂದು ನಂಬಿಕೆ ದ್ರೋಹ ಮೋದಿ ಮಾಡಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರು, ಜನರಿಗೆ ಅನ್ನಭಾಗ್ಯ, ಕ್ಷೀರಭಾಗ್ಯ ಅನೇಕ ಭಾಗ್ಯಗಳನ್ನು ನೀಡಿ ಜನಮಾನಸದಲ್ಲಿದ್ದಾರೆ. ಮೈತ್ರಿಅಭ್ಯರ್ಥಿ ವೀಣಾ ಕಾಶಪ್ಪನವರಿಗೆ ಮತ ನೀಡಬೇಕು ಎಂದು ಮನವಿ
ಮಾಡಿದರು.
ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದೆ ಹದಿನೈದು ವರ್ಷಗಳ ಕಾಲ ಸಂಸದರಾಗಿದ್ದವರು ಏನು ಕೊಡುಗೆ ಕೊಟ್ಟಿದ್ದಾರೆ ಎಂುದು ಹೇಳಲ್ಲ. ಮುಂದೆ ಆಗಬೇಕಿರುವ ಅಭಿವೃದ್ಧಿ
ಕಾರ್ಯಕ್ರಮಗಳ ಬಗ್ಗೆ ತಿಳಿಯಬೇಕು. ಒಂದು ಅವಕಾಶ ಕೊಡಿ, ನಿಮ್ಮ ಮತ ನೀಡಿ ಆಶೀರ್ವಾದ ಮಾಡಿ ಕೇಳಿಕೊಂಡರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವ, ಬಿಟಿಡಿಎ ಅಧ್ಯಕ್ಷ ಎಚ್‌.ವೈ. ಮೇಟಿ ಮಾತನಾಡಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಮತಕ್ಷೇತ್ರದಲ್ಲಿ ಪಕ್ಷಕ್ಕೆ ಅತಿಹೆಚ್ಚು ಮತ ಬರಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು, ಕಾಂಗ್ರೆಸ್‌ ಸಾಧನೆ ಹಾಗೂ ಜಿಪಂ ಅಧ್ಯಕ್ಷೆಯಾಗಿ ವೀಣಾ ಅವರು ಮಾಡಿದ ಕಾರ್ಯವನ್ನು ಜನರಿಗೆ ತಿಳಿಸಿ ಮತ ಕೇಳಬೇಕು ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಶಾಸಕ ಎಸ್‌.ಜಿ.ನಂಜಯ್ಯನಮಠ, ನಟಿ ಪಂಕಜಾ, ಜಿಪಂ ಸದಸ್ಯೆ ಕವಿತಾ ದಡ್ಡಿ, ಹನಮವ್ವ ಕರಿಹೊಳಿ, ಜಿಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಡಾ| ಎಂ.ಎಸ್‌. ದಡ್ಡೇನವರ, ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಮಂಜು ವಾಸನದ, ಸಂಚಾಲಕ ಆನಂದ ಜಿಗಜಿನ್ನಿ, ಎಸ್‌.ಎನ್‌. ರಾಂಪುರ, ಶಶಿಕಾಂತ ಪೂಜಾರ, ಜಟ್ಟೆಪ್ಪ ಮಾದಾಪುರ, ರವಿ ಹೊಸಮನಿ ಉಪಸ್ಥಿತರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next