Advertisement

ಕೊಲೆಯಾಗಿ ಪತ್ತೆಯಾಗಿದ್ದು ಬಿಜೆಪಿ ನಾಯಕನಲ್ಲ, ಅವರ ಕೆಲಸದಾಳು!

12:30 AM Jan 29, 2019 | |

ರತ್ಲಾಮ್‌: ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಹಿಮ್ಮತ್‌ ಪಾಟಿದಾರ್‌ ಎಂಬ ಆರೆಸ್ಸೆಸ್‌ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಗುರುತು ಸಿಗಲಾರದ ಆತನ ಮೃತದೇಹದ ಡಿಎನ್‌ಎ ಪರೀಕ್ಷಾ ವರದಿ ಲಭ್ಯವಾಗಿದ್ದು, ಮೃತಪಟ್ಟಾತ ಹಿಮ್ಮತ್‌ ಪಾಟಿದಾರ್‌ ಅಲ್ಲ, ಬದಲಿಗೆ ಹಿಮ್ಮತ್‌ ಅವರ ಕೆಲಸದಾಳು ಮದನ್‌ ಮಾಳವೀ ಯನದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಜತೆಗೆ, ಹಿಮ್ಮತ್‌ ಇನ್ನೂ ಜೀವಂತವಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನೂ ನೀಡಿದ್ದಾರೆ. ತೀವ್ರ ಸಾಲದಲ್ಲಿ ಮುಳುಗಿದ್ದ ಪಾಟಿದಾರ್‌, ತನ್ನ ಹೆಸರಿನಲ್ಲಿರುವ ವಿಮೆ ಯೊಂದರ ಪರಿಹಾರ ಪಡೆಯಲು ತಾನು ಸತ್ತಿರುವಂತೆ ಬಿಂಬಿಸಲು ಯತ್ನಿಸಿದ್ದಾರೆ. ಇದಕ್ಕಾಗಿ, ತನ್ನ ಕೆಲಸದಾಳುವನ್ನು ಕೊಂದಿದ್ದಾರೆ ಎಂದು ಪೊಲೀಸರು ಅನುಮಾನಿಸಿದ್ದಾರೆ. 

Advertisement

ಜ. 23ರಂದು ಹಿಮ್ಮತ್‌ ಅವರ ತಂದೆ ತಮ್ಮ ಮಗ ತಮ್ಮ ಗದ್ದೆಯಲ್ಲಿ ಸಾವಿಗೀ ಡಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ಕೈಗೊಂಡಿದ್ದ ಪೊಲೀ ಸರಿಗೆ ಪ್ರಕರಣದ ಹಿಂದಿನ ದಿನ ಹಿಮ್ಮತ್‌ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಾಳವೀಯ ಕಾಣೆಯಾಗಿದ್ದು ತಿಳಿದು ಬಂದಿದ್ದರಿಂದ ಅನುಮಾನಗೊಂಡ ಪೊಲೀಸರು ಶವದ ಸ್ಯಾಂಪಲ್‌ಗ‌ಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next