Advertisement
ಆರಂಭದಲ್ಲಿ ಹಿಂದಿನ ಠರಾವುಗಳ ದೃಢೀಕರಣ ಓದುವಾಗ ವಿಷಯ ಪ್ರಸ್ತಾವಿಸಿದ ಸದಸ್ಯ ಗುರುರಾಜ ಶಾನಭಾಗ್ ಪಟ್ಟಣದಲ್ಲಿ ಹಾದುಹೋಗುವ ಲೋಕೋಪಯೋಗಿ ಇಲಾಖೆ ರಸ್ತೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸಿಕೊಡುವ ಕುರಿತಂತೆ ಸಂಬಂಧಿಸಿದವರಿಗೆ ಪತ್ರ ಬರೆಯಲಾಗಿದೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಮುಖ್ಯಾಧಿಕಾರಿ ಪತ್ರ ಬರೆದಿದ್ದೇವೆ, ಇನ್ನೂ ಬಟವಾಡೆ ಮಾಡಿಲ್ಲ ಎಂದಾಗ ಹಲವು ಸದಸ್ಯರು ಅವರನ್ನು ತರಾಟೆಗೆ ತೆಗದುಕೊಂಡರು.
ಬರುವ ರಸ್ತೆಯ ರಿಪೇರಿ ಮಾಡಿಲ್ಲ. ನೀವು ತಡ ಮಾಡಿದರೆ ಸಂಚಾರಕ್ಕೆ ತೊಂದರೆ ಎಂದು ದೂರಿದರು. ಜಮಾ- ಖರ್ಚು ವಿವರ ನೀಡುವಾಗ ಪಟ್ಟಣದ ವಿವಿಧ ಭಾಗಗಳಲ್ಲಿ ಅಳವಡಿಸುವ ಬ್ಯಾನರ್, ಪ್ಲೆಕ್ ಮುಂತಾದವುಗಳಿಂದ 1080 ರೂ. ಸಂಗ್ರಹವಾಗಿದೆ ಎಂದಾಗ ಸದಸ್ಯರು ಪುನಃ ಮುಖ್ಯಾಧಿಕಾರಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಊರ ತುಂಬ ಬ್ಯಾನರ್, ಪ್ಲೆಕ್ಸಗಳು ಇದ್ದೇ ಇರುತ್ತವೆ. ಅವುಗಳಿಂದ ಇಷ್ಟು ಕಡಿಮೆ ಮೊತ್ತ ಸಂಗ್ರಹವಾಗಿದೆ ಎಂದರೆ ಏನರ್ಥ. ಬಸ್ ಸ್ಟಾಂಡ್, ಗಾರ್ಡನ್ ಸರ್ಕಲ್, ತಿಮ್ಮಪ್ಪ ನಾಯಕ ವೃತ್ತದಲ್ಲಿ ತಿಂಗಳುಗಟ್ಟಲೆ ಇರುತ್ತವೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಮಾರುತಿ ನಾಯ್ಕ ದೂರಿದರು. ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಗಾರ್ಡನ್ ಸುತ್ತ ಬ್ಯಾನರ್ ಕಟ್ಟಲು ಕೊಡಬೇಡಿ ಎಂದು ಹಿಂದೆಯೇ ಹೇಳಿದ್ದೆವು. ಪಪಂ ಸೋಲಾರ್ ಕಂಬಕ್ಕೂ ಬ್ಯಾನರ್ ಕಟ್ಟುತ್ತಾರೆ. ದೊಡ್ಡ ಪ್ಲೆಕ್ಗಳನ್ನು ಇಡುತ್ತಾರೆ. ಅವುಗಳನ್ನು ಜಪ್ತಿ ಮಾಡಿ ಅಳವಡಿಸಿದವರ ಮೇಲೆ ದೂರು ಕೊಟ್ಟು ಕೇಸ್ ಹಾಕಿ ಎಂದ ಕೆ.ಜಿ. ನಾಯ್ಕ ರಸ್ತೆ ಬದಿಯ ತಳ್ಳುಗಾಡಿಗಳು ಕಾಯಂ ಆಗಿ ಇದ್ದಲ್ಲೇ ಇರುತ್ತವೆ. ಹಾಗೇ ನಿಲ್ಲಿಸಲು ಕೊಡಬೇಡಿ. ನಾಳೆ ಬೆಳಗ್ಗೆ ನೋಡುತ್ತೇನೆ ಎಂದರು. ಗಾಡಿಬಿಡಿಯಲ್ಲಿ ವಾಹನಗಳ ಪಾರ್ಕಿಂಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸದಸ್ಯರು ಸಿಬ್ಬಂದಿಗೆ ಸೂಚಿಸಿದರು.
Related Articles
Advertisement
ಉಪಾಧ್ಯಕ್ಷೆ ದೇವಮ್ಮ ಚಲವಾದಿ, ಮಾರುತಿನಾಯ್ಕ, ಕೆ.ಜಿ. ನಾಯ್ಕ, ಮಾರುತಿ ಕಿಂದ್ರಿ, ಗುರುರಾಜ ಶಾನಭಾಗ, ಸುರೇಶನಾಯ್ಕ ರವಿಕುಮಾರ ನಾಯ್ಕ, ಚಂದ್ರಮ್ಮ ಎನ್., ಪುಷ್ಪಾ ಗೌಡರ್, ಮೋಹಿನಿ ನಾಯ್ಕ, ಮುಖ್ಯಾಧಿಕಾರಿ ಸತೀಶ ಗುಡ್ಡೆ ಇದ್ದರು.