Advertisement

ಮಣ್ಣು ಮಾಡಲು‌ ಮುಂದಾದ ಅನಾಥ ಶವದ ಗುರುತು ಹಚ್ಚೆಯಿಂದ ಪತ್ತೆ

06:05 PM Dec 24, 2021 | Team Udayavani |

ಶ್ರೀರಂಗಪಟ್ಟಣ: ಅನಾಥ ಶವವೆಂದು ಮಣ್ಣು ಮಾಡಲು‌ಪೊಲೀಸರು ನಿರ್ಧರಿಸಿದ್ದ ವೇಳೆ ಮೃತನ ಸಂಬಂಧಿಕರು ಮೃತ ವ್ಯಕ್ತಿಯ ಕೈಮೇಲಿದ್ದ ಹಚ್ಚೆ ಗುರುತು ಪತ್ತೆ ಹಚ್ಚಿ ಶವವನ್ನು ಕೊಂಡೊಯ್ದ ಘಟನೆ ನಡೆದಿದೆ.

Advertisement

ಇಲ್ಲಿನ ಚೆಕ್ ಪೋಸ್ಟ್ ಬಳಿ ಗುರುವಾರ ಅಪರಿಚಿತ ಗಂಡಸಿನ ಶವವೊಂದು ಪತ್ತೆ ಯಾಗಿತ್ತು.ಅನಾರೋಗ್ಯದಿಂದ ವ್ಯಕ್ತಿ ಮೃತಪಟ್ಟಿದ್ದು, ಸಂಜೆ ಸ್ಥಳಕ್ಕೆ ತೆರಳಿದ ಪೊಲೀಸರು‌ ಪರಿಶೀಲನೆ ನಡೆಸಿ ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ತಂದು ಶವಾಗಾರದಲ್ಲಿರಿಸಿದ್ದರು.

ಮೃತ ವ್ಯಕ್ತಿಯ ಕೈ ಮೇಲಿದ್ದ ಹಚ್ಚೆಯ ಗುರುತುವ್ಯಕ್ತಿಯ ವಿಳಾಸವನ್ನು ಪತ್ತೆ ಮಾಡಿಕೊಟ್ಟಿದ್ದು, ಬೆಳಗೊಳ ಗ್ರಾಮದ ರಾಮೇಗೌಡ(65) ಎಂದು ಗುರುತಿ ಸಲಾಗಿದ್ದು,ಇವರು ಕಳೆದ 15 ದಿನಗಳಿಂದ ಗ್ರಾಮದಿಂದ ನಾಪತ್ತೆಯಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next