Advertisement

Crime: ಪತ್ನಿಗೆ 22 ಕಡೆ ತಿವಿದು, ಕತ್ತು ಕೊಯ್ದು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

11:26 AM Oct 02, 2024 | Team Udayavani |

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 2016ರಲ್ಲಿ ಪತ್ನಿಯ ಕುತ್ತಿಗೆ ಸುತ್ತ ಮುತ್ತ 22 ಕಡೆ ತಿವಿದು, ನಂತರ ಕತ್ತು ಕೊಯ್ದು ಕೊಲೆ ಮಾಡಿದ್ದ ಪತಿಗೆ 46ನೇ ಸಿಸಿಎಚ್‌ ನ್ಯಾಯಾಲ ಯವು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.

Advertisement

ಹಲಸೂರು ಠಾಣಾ ವ್ಯಾಪ್ತಿಯ ರವಿರಾಜ್‌ ಶೆಟ್ಟಿ ಆಪಾದಿತ. 2010ರ ಮೇ 16ರಂದು ಉಡುಪಿ ಜಿಲ್ಲೆಯ ಯಶೋದಾ ಎಂಬುವರ ಪುತ್ರಿ ಸುಪ್ರಿತಾ ಎಂಬುವರನ್ನು ರವಿರಾಜ್‌ ಶೆಟ್ಟಿ ವಿವಾಹವಾಗಿದ್ದನು. ದಂಪತಿಗೆ ಓರ್ವ ಪುತ್ರಿಯಿದ್ದು ಹಲಸೂರು ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರು. ರವಿರಾಜ್‌ ಶೆಟ್ಟಿ ಸಣ್ಣಪುಟ್ಟ ವಿಷಯಗಳಿಗೆ ಪತ್ನಿಯೊಂದಿಗೆ ಗಲಾಟೆ ಮಾಡಿಕೊಳ್ಳುತ್ತ ಮನಸ್ತಾಪ ಹೊಂದಿದ್ದರು. ಅದೇ ದ್ವೇಷದಿಂದ ಸೆ.14ರಂದು ರಾತ್ರಿ ಸುಮಾರು 8.30ರಲ್ಲಿ ಸುಪ್ರಿತಾ ಜತೆಗೆ ಜಗಳ ತೆಗೆದು ಚಾಕುವಿನಿಂದ ಆಕೆಯ ಕುತ್ತಿಗೆ ಸುತ್ತ ಮುತ್ತ 22 ಕಡೆ ತಿವಿದು, ನಂತರ ಕತ್ತು ಕೊಯ್ದು ಕೊಲೆ ಮಾಡಿದ್ದನು.

ಈ ಬಗ್ಗೆ ಹಲಸೂರು ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಲಸೂರು ಪೊಲೀಸ್‌ ಠಾಣೆಯ ಅಂದಿನ ಪೊಲೀಸ್‌ ಇನ್‌ ಸ್ಪೆಕ್ಟರ್‌ ಸುಬ್ರಹ್ಮಣ್ಯ ತನಿಖೆ ಪೂರ್ಣಗೊಳಿಸಿ ರವಿರಾಜ್‌ ಶೆಟ್ಟಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಸಿಸಿಎಚ್‌-46ನೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಸರ್ಕಾರಿ ಅಭಿಯೋಜಕಿ ಕೆ.ಎಸ್‌.ಲತಾ ವಾದ ಮಂಡಿಸಿದ್ದರು. ಕೃತ್ಯ ಎಸಗಿರುವುದು ಸಾಬೇತಾದ ಹಿನ್ನೆಲೆಯಲ್ಲಿ ಸಿಸಿಎಚ್‌ -46ನೇ ನ್ಯಾಯಾಲಯವು ರವಿರಾಜ್‌ ಶೆಟ್ಟಿಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next