Advertisement

ಮೃತದೇಹ ಕೊಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಣೆ

01:22 PM Dec 09, 2017 | |

ಹುಬ್ಬಳ್ಳಿ: ಚಿಕಿತ್ಸೆ ಫಲಿಸದೆ ಮೃತಪಟ್ಟ ವ್ಯಕ್ತಿಯ ಶವವನ್ನು ಹಣ ಪಾವತಿಸದೆ ಕೊಡುವುದಿಲ್ಲವೆಂದು ಆಸ್ಪತ್ರೆ ಸಿಬ್ಬಂದಿ ಪಟ್ಟು ಹಿಡಿದಿದ್ದ ರಿಂದ ಮೃತನ  ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟಿಸಿದ ಘಟನೆ ನಗರದಲ್ಲಿ ಶುಕ್ರವಾರ ನಡೆಯಿತು.

Advertisement

ಹಾವೇರಿ ತಾಲೂಕು ಯತ್ನಳ್ಳಿಯ ಬಸವರಾಜ ಮಾವಿನಕಾಯಿ  ಎಂಬವರನ್ನು ನಗರದ ಖಾಸಗಿ ಆಸ್ಪತ್ರೆಗೆ ಗುರುವಾರ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದರು. ಆಸ್ಪತ್ರೆಯವರು 24  ಸಾವಿರ ರೂ. ಬಿಲ್‌ ಮಾಡಿದ್ದರು. ಆದರೆ, ಮೃತನ ಕುಟುಂಬದವರು ತಮ್ಮ ಬಳಿ ಅಷ್ಟು ಹಣವಿಲ್ಲ.

ಇರುವ 6 ಸಾವಿರ ರೂ. ಪಾವತಿಸಿ ಕೊಂಡು ಮೃತದೇಹ ಕೊಡಿ ಎಂದು ಕೇಳಿದರೂ ಪೂರ್ತಿ ಹಣ ಪಾವತಿಸದೆ ದೇಹ ಕೊಡಲ್ಲವೆಂದು ಆಸ್ಪತ್ರೆ ಸಿಬ್ಬಂದಿ ರಾತ್ರಿವರೆಗೂ ಸತಾಯಿಸಿದರೆನ್ನಲಾಗಿದೆ. ಆಸ್ಪತ್ರೆಯವರಿಗೆ  ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಕರೆ ಮಾಡಿ ಹೇಳಿದ ನಂತರವೇ ಮೃತ ದೇಹವನ್ನು ಕುಟುಂಬದವರಿಗೆ ಕೊಟ್ಟರು ಎಂದು ತಿಳಿದುಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next