Advertisement

ಲಿಂಗದ ಮೇಲೆ ಕೊಂಬುಗಳು ಮೂಡಿದವು

07:48 PM Nov 08, 2019 | Lakshmi GovindaRaju |

ಪುಣ್ಯಕ್ಷೇತ್ರ ಶೃಂಗೇರಿ ಬಳಿ ಇರುವ ಋಷ್ಯಶೃಂಗಪುರ “ಕಿಗ್ಗ’ ಎಂದೇ ಕರೆಯಲ್ಪಡುತ್ತದೆ. ಈ ಊರಿಗೆ ಋಷ್ಯಶೃಂಗಪುರ ಎಂಬ ಹೆಸರು ಬರಲು ಕಾರಣ, ರಾಮಾಯಣದಲ್ಲಿ ಬರುವ ಋಷ್ಯಶೃಂಗ ಋಷಿ. ಆತನಿಗೆ ಹಣೆಯ ಮೇಲೆ ಕೊಂಬುಗಳಿದ್ದವು. ಋಷ್ಯಶೃಂಗ, ರೋಮಪಾದ ಎಂಬ ರಾಜನ ಮಗಳನ್ನು ಮದುವೆಯಾಗಿ ಅಲ್ಲೇ ನೆಲೆಸಿದ್ದ. ಏಕಾಏಕಿ ಸಂಸಾರದಲ್ಲಿ ವಿರಕ್ತಿ ಮೂಡಿ ಎಲ್ಲರನ್ನೂ ಬಿಟ್ಟು ಕಾಡು ಸೇರಿ ಲಿಂಗಪೂಜೆಯಲ್ಲಿ ಮಗ್ನನಾಗಿ, ಪ್ರಾಣ ತ್ಯಾಗ ಮಾಡಿದ. ಆತನ ದೇಹದಿಂದ ಆತ್ಮ ಹೊರಬರುವ ಸಮಯದಲ್ಲಿ ಮಿಂಚೊಂದು ಹರಿಯಿತು. ಆ ಮಿಂಚು, ಎದುರಿದ್ದ ಲಿಂಗದ ಒಳಗೆ ಐಕ್ಯವಾಯಿತು. ಒಡನೆಯೇ ಲಿಂಗಕ್ಕೆ ಕೊಂಬುಗಳು ಮೂಡಿದವು. ಈ ಲಿಂಗ ಇಂದಿಗೂ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿದೆ. ಅದರಿಂದಾಗಿಯೇ ಊರಿಗೆ ಋಷ್ಯಶೃಂಗಪುರ ಎಂಬ ಹೆಸರು ಬಂದಿದೆ.

Advertisement

* ಮಹಾಬಲ ಭಟ್‌, ಶೃಂಗೇರಿ

Advertisement

Udayavani is now on Telegram. Click here to join our channel and stay updated with the latest news.

Next