Advertisement

Shiv Lingam Melts: ಉಷ್ಣ ಮಾರುತ: ಅಮರನಾಥ ಶಿವಲಿಂಗ ಈಗಲೇ ಕರಗಲು ಶುರು?

11:49 PM Jul 06, 2024 | Team Udayavani |

ಶ್ರೀನಗರ: ಅಮರನಾಥದ ಗುಹೆಯಲ್ಲಿ ಹಿಮದಿಂದ ಉಂಟಾಗಿರುವ ಶಿವಲಿಂಗ ಕರಗಲು ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ಪ್ರಸಕ್ತ ವರ್ಷ ಉತ್ತರ ಭಾರತದ ಹೆಚ್ಚಿನ ಸ್ಥಳಗಳಲ್ಲಿ ಉಷ್ಣ ಮಾರುತದ ಛಾಯೆ ಬಿರುಸಾಗಿ ಇದ್ದದ್ದು ಈ ಬೆಳವಣಿಗೆಗೆ ಕಾರಣ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಮೇನಿಂದ ಹಿಮದಲ್ಲಿ ಶಿವಲಿಂಗ ಉಂಟಾಗಲು ಆರಂಭವಾಗುತ್ತದೆ. ಅದು ಆಗಸ್ಟ್‌ ವರೆಗೆ ಹಾಗೆಯೇ ಇರುತ್ತದೆ. ಅಮರನಾಥ ಯಾತ್ರೆಯ ಮುಕ್ತಾಯದ ಬಳಿಕ ನಿಧಾನವಾಗಿ ಶಿವಲಿಂಗ ಕರಗಲು ಆರಂಭವಾಗುತ್ತದೆ. ಆದರೆ ಈ ಬಾರಿ ಜಾಗತಿಕ ತಾಪಮಾನ ವ್ಯತ್ಯಯದಿಂದ ಜುಲೈನಲ್ಲಿ ಶಿವಲಿಂಗ ಕರಗಲು ಆರಂಭಿಸಿದೆ.

Advertisement

ಭಾರೀ ಮಳೆ: ಯಾತ್ರೆ ತಾತ್ಕಾಲಿಕ ಸ್ಥಗಿತ!
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ ಆಗುತ್ತಿದ್ದು, ಅಮರನಾಥ ಯಾತ್ರೆ ಸಾಗುವ 2 ಮಾರ್ಗಗಳಲ್ಲೂ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆ ಯಲ್ಲಿ ಯಾತ್ರೆಯನ್ನು ಶನಿವಾರ ತಾತ್ಕಾಲಿ ಕವಾಗಿ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ರಾತ್ರಿಯಿಂದ ಮಳೆ ಹೆಚ್ಚಾಗಿದ್ದಕ್ಕೆ ಮುಂಜಾಗ್ರತೆಯಾಗಿ ಕ್ರಮ ಕೈಗೊಂಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next