Advertisement

ಇರುಮುಡಿ ಇಲ್ಲದೆ 18 ಮೆಟ್ಟಿಲು ಹತ್ತಿದ ಪ್ರಕರಣ ಹೈಕೋರ್ಟ್‌ಗೆ

10:11 AM Nov 08, 2018 | Harsha Rao |

ಕೊಚ್ಚಿ: ತಿರುವಾಂಕೂರು ದೇವಸ್ವಂ ಮಂಡಳಿ ಸದಸ್ಯ ಕೆ.ಪಿ. ಶಂಕರದಾಸ್‌ರನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿ ಮಂಡಳಿ ಮಾಜಿ ಅಧ್ಯಕ್ಷ ಪ್ರಯಾರ್‌ ಗೋಪಾಲಕೃಷ್ಣನ್‌ ಎರ್ನಾಕುಳಂನಲ್ಲಿರುವ ಕೇರಳ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

Advertisement

ಸೋಮವಾರ ಶಂಕರ ದಾಸ್‌ ಅಯ್ಯಪ್ಪ ಸ್ವಾಮಿ ದೇಗುಲದ ಸಂಪ್ರದಾಯಗಳನ್ನು ಮೀರಿದ್ದಾರೆ ಎನ್ನುವುದು ಗೋಪಾಲಕೃಷ್ಣನ್‌ರ ಆರೋಪ. ದೇವಸ್ಥಾನದ ಸಂಪ್ರ ದಾಯದ ಪ್ರಕಾರ, ಇರುಮುಡಿ ಹೊತ್ತವರಿಗೆ ಮಾತ್ರ ದೇಗುಲದ 18 ಮೆಟ್ಟಿಲುಗಳನ್ನು ಏರಲು ಅವಕಾಶವಿರುತ್ತದೆ. ಆದರೆ, ಇದು ಗೊತ್ತಿದ್ದರೂ ನ.5ರಂದು ಪ್ರತಿಭಟನೆ ವೇಳೆ ಶಂಕರದಾಸ್‌ ಅವರು ಇರುಮುಡಿ ಇಲ್ಲದೆ ದೇಗುಲದ 18 ಪವಿತ್ರ ಮೆಟ್ಟಿಲುಗಳನ್ನೇರಿದ್ದರು. ಅದು ದೇಗುಲದ ಸಂಪ್ರದಾಯದ ಉಲ್ಲಂಘನೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿ ಸದಸ್ಯರು ದೇಗುಲ ಸಂಪ್ರದಾಯಗಳನ್ನು ಉಲ್ಲಂ ಸಿದಲ್ಲಿ ಅವರನ್ನು ವಜಾ ಮಾಡಲು ಅವಕಾಶ ಉಂಟು. ದಾಸ್‌ ಮತ್ತು ಇತರರು ಅದನ್ನು ಉಲ್ಲಂ ಸಿದ್ದರು ಎಂದು ಗೋಪಾಲಕೃಷ್ಣನ್‌ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಇದೇ ವೇಳೆ, 52 ವರ್ಷದ ಮಹಿಳಾ ಯಾತ್ರಿಕರೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಬುಧವಾರ ಪಟ್ಟಣಂತಿಟ್ಟದ ಎಲಂತೂರು ನಿವಾಸಿ ಸೂರಜ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next