Advertisement

ಕಪ್ಪು ಗುಲಾಬಿ ಚಿತ್ರೀಕರಣದಲ್ಲಿ ನಾಯಕಿ ಹಣೆಗೆ ಗಾಯ

11:01 AM Feb 20, 2018 | |

“ಕಪ್ಪು ಗುಲಾಬಿ’ ಚಿತ್ರೀಕರಣದ ವೇಳೆ ನಟಿ ನಿಖೀತಾ ನಾರಾಯಣ್‌ ಹಣೆಗೆ ಏಟು ಬಿದ್ದಿದ್ದು, ಚಿತ್ರೀಕರಣವನ್ನು ಮುಂದೂಡಲಾಗಿದೆ. ತಿಂಗಳ ಹಿಂದೆಯಷ್ಟೇ “ಕಪ್ಪು ಗುಲಾಬಿ’ ಎಂಬ ಚಿತ್ರ ಸೆಟ್ಟೇರಿತ್ತು. ಸುನೀಲ್‌ ಪುರಾಣಿಕ್‌ ನಿರ್ದೇಶನದ ಈ ಚಿತ್ರದಲ್ಲಿ ಅವರ ಪುತ್ರ ಸಾಗರ್‌ ಪುರಾಣಿಕ್‌ ನಾಯಕ.

Advertisement

ಮಹಿಳಾ ಪ್ರಧಾನವಾದ ಈ ಚಿತ್ರದಲ್ಲಿ ನಿಖೀತಾ ನಾರಾಯಣ್‌ ನಾಯಕಿಯಾಗಿದ್ದರು. ಇತ್ತೀಚೆಗೆ ಚಿತ್ರದ ಚೇಸಿಂಗ್‌ ದೃಶ್ಯದ ಚಿತ್ರೀಕರಣದ ವೇಳೆ ಮರದ ತುಂಡೊಂದು ನಾಯಕಿಯ ಹಣೆಗೆ ತಾಗಿ ಗಾಯವಾಗಿದ್ದು, ವೈದ್ಯರು ಒಂದು ತಿಂಗಳ ವಿಶ್ರಾಂತಿ ಸೂಚಿಸಿದ್ದಾರೆ. 

ಅಷ್ಟಕ್ಕೂ ಆಗಿದ್ದೇನು: ದೇವಸ್ಥಾನವೊಂದರಲ್ಲಿ ನಾಯಕ-ನಾಯಕಿ ವಿವಾಹವಾಗುವ ಸನ್ನಿವೇಶವದು.ಆ ವೇಳೆ ರೌಡಿಗಳು ಅಟ್ಯಾಕ್‌ ಮಾಡುವಾಗ ನಾಯಕ, ನಾಯಕಿಯ ಕೈ ಹಿಡಿದು ಓಡುತ್ತಾ, ರೌಡಿಗಳ ಜೊತೆಯೂ ಕಾದಾಡುವ ಸನ್ನಿವೇಶ. ಈ ವೇಳೆ ನಾಯಕನ ಕೈಯಿಂದ ಜಾರಿದ ಮರದ ತುಂಡೊಂದು ಹಿಂದೆ ಬರುತ್ತಿದ್ದ ನಾಯಕಿಯ ಹಣೆಗೆ ಬಡಿದಿದೆ. ಇದರಿಂದ ಹಣೆಗೆ ಗಾಯವಾಗಿದೆ.

ಈ ಬಗ್ಗೆ ಮಾತನಾಡಿದ ನಿರ್ದೇಶಕ ಸುನೀಲ್‌ ಪುರಾಣಿಕ್‌, “ನಾಯಕ -ನಾಯಕಿ ರೈಲ್ವೇ ಗೇಟ್‌ ತರಹದ ಗೇಟ್‌ವೊಂದನ್ನು ದಾಟುವಾಗ ಅದರಲ್ಲಿದ್ದ ಮರದ ತುಂಡೊಂದು ರಭಸವಾಗಿ ಬಂತು. ನಾಯಕ ಅದನ್ನು ತಡೆದರೂ ಅದು ನಾಯಕಿಯ ಹಣೆಗೆ ತಾಗಿ ಏಟಾಗಿದೆ. ನಾಯಕ ಸಾಗರ್‌ ಕೈ ಕೂಡಾ ಫ್ರಾಕ್ಚರ್‌ ಆಗಿದೆ. ಸದ್ಯ ಶೂಟಿಂಗ್‌ ಅನ್ನು ನಿಲ್ಲಿಸಿದ್ದೇವೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next