Advertisement

ವಾಹನ ಸವಾರರ ಕಾಡಿದ ಮಳೆ

12:11 PM Aug 31, 2018 | Team Udayavani |

ಬೆಂಗಳೂರು: ಕೆಲ ದಿನಗಳಿಂದ ವಿರಾಮ ನೀಡಿದ್ದ ಮಳೆ ನಗರದಲ್ಲಿ ಗುರುವಾರ ಮತ್ತೆ ಅಬ್ಬರಿಸಿತು. ಇದರಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಜತೆಗೆ ಕೆಲವೆಡೆ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ಸಾರ್ವಜನಿಕರು ಪರದಾಡಿದರು.

Advertisement

ಸಂಜೆ 6 ಗಂಟೆ ಸುಮಾರಿಗೆ ಶುರುವಾದ ಮಳೆ, ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದರಿಂದ ಪ್ರಮುಖ ರಸ್ತೆಗಳು, ಅಂಡರ್‌ಪಾಸ್‌ಗಳು, ಜಂಕ್ಷನ್‌ಗಳು ಜಲಾವೃತಗೊಂಡವು. ಪರಿಣಾಮ ವಾಹನಗಳ ವೇಗಕ್ಕೆ ಬ್ರೇಕ್‌ ಬಿದ್ದಿತು. ಕೆಲಸ ಮುಗಿಸಿಕೊಂಡು ಮನೆ ಸೇರುವ ಧಾವಂತದಲ್ಲಿದ್ದ ಜನರಿಗೆ ಮಳೆಯ ಬಿಸಿ ತುಸು ಜೋರಾಗೇ ತಟ್ಟಿತು.

ಓಕಳೀಪುರ, ಮಲ್ಲೇಶ್ವರ, ಮೆಜೆಸ್ಟಿಕ್‌, ಕೆ.ಆರ್‌.ಮಾರುಕಟ್ಟೆ, ರಾಜರಾಜೇಶ್ವರಿ ನಗರ, ಹೆಬ್ಟಾಳ ಮೇಲ್ಸೇತುವೆ ಮತ್ತಿತರ ಕಡೆಗಳಲ್ಲಿ ಕಿ.ಮೀ. ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಲಹೊತ್ತಿನಲ್ಲಿ ಮಳೆ ಅಬ್ಬರ ಕಡಿಮೆ ಆಗುತ್ತಿದ್ದಂತೆ, ಸಂಖಚಾರ ವ್ಯವಸ್ಥೆ ಸಹಜ ಸ್ಥಿತಿಯತ್ತ ಮರಳಿತು. ಬಸ್‌ಗಳನ್ನು ಅವಲಂಬಿಸಿದವರು ಗಂಟೆಗಟ್ಟಲೆ ಕಾದುಕುಳಿತರು.

ನಗರದ ಹೊರವಲಯದಲ್ಲಿ ಮಳೆ ಪ್ರಮಾಣ ಹೆಚ್ಚಿತ್ತು. ವರ್ತೂರಿನಲ್ಲಿ ಅತಿ ಹೆಚ್ಚು 25.5 ಮಿ.ಮೀ. ಮಳೆ ಬಿದ್ದಿದೆ. ಉಳಿದಂತೆ ಕೋರಮಂಗಲ 7.5 ಮಿ.ಮೀ., ಎಚ್‌ಎಸ್‌ಆರ್‌ ಲೇಔಟ್‌ 13.5, ನಾಗಪುರ 13.5, ತಾವರೆಕೆರೆ 19, ದೊಡ್ಡನೆಕ್ಕುಂದಿ 22, ಹಾಲನಾಯಕನಹಳ್ಳಿ 12.5, ಲಾಲ್‌ಬಾಗ್‌ 6, ಕೆಂಗೇರಿ 3, ರಾಜರಾಜೇಶ್ವರಿನಗರ 4, ಹೆಸರಘಟ್ಟ ವ್ಯಾಪ್ತಿಯಲ್ಲಿ 2 ಮಿ.ಮೀ. ಮಳೆ ಬಿದ್ದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next