Advertisement

ಅನುದಾನ ನೀಡುವಲ್ಲಿ ಸಿಎಂ ಜಿಪುಣ: ಎಂ.ಬಿ. ಪಾಟೀಲ

03:45 AM Mar 06, 2017 | |

ವಿಜಯಪುರ: ಅಭಿವೃದ್ಧಿಗೆ ಅನುದಾನ ನೀಡುವ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಜಿಪುಣರಿದ್ದು, ಶೆಟ್ಟರ ರೀತಿಯಲ್ಲಿ ಲೆಕ್ಕ ಹಾಕುತ್ತಾರೆ. ಹೀಗೆ ತಮ್ಮ ಸರ್ಕಾರದ ನಾಯಕನನ್ನು ಹಾಸ್ಯದ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡುವ ನಾಯಕ ಎಂದು ಜಲಸಂಪನ್ಮೂಲ ಸಚಿವ ಡಾ. ಎಂ.ಬಿ. ಪಾಟೀಲ ಬಣ್ಣಿಸಿದರು. 

Advertisement

ಭಾನುವಾರ ವಿಜಯಪುರದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ವಿವಿ ಅಭಿವೃದ್ಧಿಗೆ 100 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ ಕುಲಪತಿ ಡಾ| ಸಬಿಹಾ ಭೂಮಿಗೌಡ ಅವರಿಗೆ ಪಾಟೀಲರು ಹೀಗೆ ಪ್ರತಿಕ್ರಿಯಿಸಿದರು. ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಚನಾತ್ಮಕ ಕಾರ್ಯಕ್ರಮಗಳಿಗೆ ಮಾತ್ರ ಅನುದಾನ ನೀಡುವ ಸಿಎಂ ಬೊಕ್ಕಸದ ಒಂದು ರೂ. ಕೂಡ ವ್ಯರ್ಥವಾಗಿ ಖರ್ಚು ಮಾಡಲು ಬಯಸುವುದಿಲ್ಲ. ಯಾವುದೇ ಯೋಜನೆ, ಕಾರ್ಯಕ್ರಮಗಳಿದ್ದರೂ ಹತ್ತಾರು ಬಾರಿ ಯೋಚಿಸಿ, ಅಭಿವೃದ್ಧಿಗೆ ಪೂರಕ ಇದ್ದಲ್ಲಿ ಮಾತ್ರ ಅನುದಾನ ನೀಡುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next