Advertisement

ಎಂಟು ದಿನಗಳ ಹಸುಗೂಸು ಕೊಂದ ಅಜ್ಜಿ?

08:55 AM Dec 01, 2019 | Sriram |

ಬೆಂಗಳೂರು: ಎಂಟು ದಿನಗಳ ಹಸುಗೂಸನ್ನು ಮೊದಲನೇ ಮಹಡಿಯಿಂದ ಎಸೆದು ಕೊಂದಿರುವ ಅಮಾನುಷ ಘಟನೆ ಸೋಲದೇವನಹಳ್ಳಿಯ ಮೇದರಹಳ್ಳಿಯಲ್ಲಿ ಶನಿವಾರ ನಡೆದಿದೆ.

Advertisement

ಮೇದರಹಳ್ಳಿ ನಿವಾಸಿ ಮಾರ್ಷಲ್‌ ಮತ್ತು ತಮಿಳ್‌ ಸೆಲ್ವಿ ದಂಪತಿಯ ಹೆಣ್ಣು ಮಗುವನ್ನು ಕೊಲೆಗೈಯ್ಯಲಾಗಿದ್ದು ಘಟನೆ ಸಂಬಂಧ ಮಗುವಿನ ಅಜ್ಜಿ ಪರಮೇಶ್ವರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ತಮಿಳ್‌ ಸೆಲ್ವಿ ಎಂಟು ದಿನಗಳ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ತಮಿಳ್‌ ಸೆಲ್ವಿ ಮಗುವನ್ನು ಅತ್ತೆ ಪರಮೇಶ್ವರಿ ಪಕ್ಕದಲ್ಲಿ ಮಲಗಿಸಿ ಶೌಚಾಲಯಕ್ಕೆ ಹೋಗಿದ್ದರು. ಕೆಲವು ಹೊತ್ತಿನ ಬಳಿಕ ಅತ್ತೆಯೇ ಮಗು ಕಾಣುತ್ತಿಲ್ಲ ಎಂದು ಚೀರಾಡಿದರು.

ಗಾಬರಿಗೊಂಡ ಆಕೆ ಮನೆಯ ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಅನಂತರ ಅನುಮಾನದ ಮೇರೆಗೆ ಮನೆ ಹಿಂಭಾಗದ ಖಾಲಿ ನಿವೇಶನದಲ್ಲಿ ಹುಡುಕಾಡಿದಾಗ ಮಗುವಿನ ಮೃತ ದೇಹ ಪತ್ತೆಯಾಯಿತು.

ಅನಾರೋಗ್ಯದಿಂದ ಬಳಲುತ್ತಿದ್ದ ಮಗು
ಅವಧಿ ಪೂರ್ವದಲ್ಲಿ ಮಗು(ಎಂಟು ತಿಂಗಳಿಗೆ) ಜನಿಸಿದ್ದು, ಅನಾರೋಗ್ಯದಿಂದ ಬಳಲುತ್ತಿತ್ತು. ಹೀಗಾಗಿ ಹತ್ತಾರು ಕಡೆ ಚಿಕಿತ್ಸೆ ಕೊಡಿಸಿದರೂ ಚೇತರಿಸಿಕೊಂಡಿರಲಿಲ್ಲ. ಅದು ಅಜ್ಜಿ ಪರಮೇಶ್ವರಿ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ, ತಂದೆ-ತಾಯಿ ಕೂಡ ಬೇಸರಗೊಂಡಿದ್ದರು ಎನ್ನಲಾಗಿದೆ ಎಂದು ಪೊಲೀಸರು ಹೇಳಿದರು.

ಪರಮೇಶ್ವರಿ ಹಂತಕಿ?
ಮಾರ್ಷಲ್‌ ಕುಟುಂಬ ವಾಸವಾಗಿರುವ ಮನೆಗೆ ಎರಡು ಬಾಗಿಲುಗಳಿವೆ. ಒಂದೆಡೆ ಪ್ರವೇಶದ್ವಾರವಿದ್ದರೆ. ಮತ್ತೂಂದೆಡೆ ಅಡುಗೆಮನೆಯಿಂದ ಹಿಂಬದಿ ಹೋಗಲು ಮತ್ತೂಂದು ಬಾಗಿಲು ಇದೆ. ಈ ಮೂಲಕವೇ ಮಗುವನ್ನು ಮನೆಯ ಹಿಂದಿನ ಖಾಲಿ ನಿವೇಶನಕ್ಕೆ ಎಸೆದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

Advertisement

ಮನೆಯಲ್ಲಿ ಪರಮೇಶ್ವರಿ ಮತ್ತು ಆಕೆಯ ಸೊಸೆ ಸೆಲ್ವಿ ಹೊರತು ಪಡಿಸಿ ಬೇರೆ ಯಾರು ಇರಲಿಲ್ಲ. ಹೊರಗಡೆಯಿಂದಲೂ ಬಂದಿಲ್ಲ. ಇನ್ನು ಸೆಲ್ವಿ ಶೌಚಾಲಯಕ್ಕೆ ಹೋದಾಗ ಮಗು ಪರಮೇಶ್ವರಿ ಬಳಿಯೇ ಇತ್ತು. ಹೀಗಾಗಿ ಈಕೆಯ ಕೃತ್ಯ ಎಸಗಿದ್ದಾರೆ ಎಂಬ ಅನುಮಾನವಿದ್ದು, ವಿಚಾರಣೆ ನಡೆಯುತ್ತಿದೆ.

ಆದರೆ, ವಿಚಾರಣೆ ಸಂದರ್ಭದಲ್ಲಿ ತಾನೂ ಕೃತ್ಯ ಎಸಗಿಲ್ಲ. ಟಿವಿ ನೋಡುವಾಗ ಅಪರಿಚಿತರು ಮಗುವನ್ನು ಎತ್ತೂಯ್ದು ಕೊಂದಿರಬಹುದು ಎಂದು ಹೇಳಿಕೆ ದಾಖಲಿಸಿದ್ದಾರೆ. ಸೊಸೆ ಸೆಲ್ವಿ ಅತ್ತೆ ಪರಮೇಶ್ವರಿ ಹೊರತು ಪಡಿಸಿ ಮನೆಗೆ ಬೇರೆ ಯಾರು ಬಂದಿಲ್ಲ ಎಂದು ಹೇಳುತ್ತಿದ್ದು, ತನಿಖೆ ಮಂದುವರಿದಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next