Advertisement

ಅಧಿಕಾರ ದಾಹದ ಕಚ್ಚಾಟದಲ್ಲಿರುವ ಸರ್ಕಾರ ಸ್ವಾತಂತ್ರ್ಯೋತ್ಸವವನ್ನೂ ಮರೆತಿದೆ: ಕಾಂಗ್ರೆಸ್

12:06 PM Aug 10, 2021 | Team Udayavani |

ಬೆಂಗಳೂರು: ಅಧಿಕಾರ ದಾಹದ ಆಂತರಿಕ ಕಚ್ಚಾಟದಲ್ಲಿರುವ ರಾಜ್ಯ ಸರ್ಕಾರ ಸ್ವಾತಂತ್ರ್ಯೋತ್ಸವವನ್ನೂ ಮರೆತಿದೆ ಎಂದು ರಾಜ್ಯ ಕಾಂಗ್ರೆಸ್ ಟೀಕೆ ಮಾಡಿದೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, “ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮರೆತ ಸರ್ಕಾರ” ಎಂಬ ಉದಯವಾಣಿ ವರದಿಯನ್ನು ಉಲ್ಲೇಖಿಸಿದೆ.

ಇದನ್ನೂ ಓದಿ:ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮರೆತ ಸರಕಾರ!

ಸ್ವತಂತ್ರಕ್ಕೆ ಸಣ್ಣ ಕೊಡುಗೆಯೂ ಇಲ್ಲದ ಬಿಜೆಪಿ ಪಕ್ಷ ಸ್ವಾತಂತ್ರ್ಯೋತ್ಸವವನ್ನು ಗೌರವಿಸುವುದೂ ಅರಿತಿಲ್ಲ. ತ್ಯಾಗ, ಬಲಿದಾನಗಳಿಂದ ಸಿಕ್ಕ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಸರ್ಕಾರ ಕಡೆಗಣಿಸಿದ್ದು ಅಕ್ಷಮ್ಯ. ಅಧಿಕಾರ ದಾಹದ ಆಂತರಿಕ ಕಚ್ಚಾಟದಲ್ಲಿರುವ ಸರ್ಕಾರ, ನೆರೆ, ಕರೋನಾವನ್ನೂ ಮರೆತಿದೆ, ಸ್ವಾತಂತ್ರ್ಯೋತ್ಸವವನ್ನೂ ಮರೆತಿದೆ ಎಂದು ಟೀಕೆ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next