Advertisement

ಕೊಪ್ಪಳದಲ್ಲಿ ಮುಸ್ಲಿಂ ಯುವಕರಿಂದ ಹಿಂದೂ ವೃದ್ಧನ ಅಂತ್ಯಸಂಸ್ಕಾರ

06:47 PM Apr 27, 2021 | Team Udayavani |

ಕೊಪ್ಪಳ: ತೀವ್ರ ಉಸಿರಾಟ ತೊಂದರೆಯಿಂದ ಬಳಲಿ ಮೃತಪಟ್ಟ 85 ವರ್ಷದ ವಯೋವೃದ್ಧನ ಅಂತ್ಯಸಂಸ್ಕಾರವನ್ನು ನಗರದ ಮುಸ್ಲಿಂ ಯುವಕರು ಗವಿಮಠದ ಹಿಂಭಾಗದಲ್ಲಿನ ಚಿತಾಗಾರದಲ್ಲಿ ಹಿಂದೂ ಧಾರ್ಮಿಕ ಪದ್ಧತಿ ಅನುಸಾರವೇ ನೆರವೇರಿಸುವ ಮೂಲಕ ಸಮಾಜಮುಖಿ ಸೇವೆಗೆ ಸಾಕ್ಷಿಯಾದರು.

Advertisement

ಇಲ್ಲಿನ ವಿಕಾಸ ನಗರದ ನಿವಾಸಿ ವಿಠ್ಠಲರಾವ್‌ ಮಹೇಂದ್ರಕರ್‌ (85) ರವಿವಾರ ಸಂಜೆ ಮನೆಯಲ್ಲಿ ಉಸಿರಾಟ ತೊಂದರೆಯಿಂದ ಬಳಲಿ ಮೃತಪಟ್ಟಿದ್ದರು. ಸಂಬಂಧಿಕರು ಬೇರೆ ಬೇರೆ ಊರುಗಳಲ್ಲಿದ್ದರು. ತಂದೆ ಸಾವಿನ ವಿಷಯ ತಿಳಿದು ಮೃತರ ಪುತ್ರ ಪ್ರಮೋದ ಆರೋಗ್ಯದಲ್ಲಿ ಏರುಪೇರಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಮೃತ ವೃದ್ಧನ ಅಳಿಯ ಬೇರೆ ಊರಿನಿಂದ ಆಗಮಿಸಿದ್ದರೂ ಸ್ಥಳೀಯರು ಯಾರೂ ಪರಿಚಯ ಇರಲಿಲ್ಲ. ಆಗ ಕೆಲ ಸ್ನೇಹಿತರ ನೆರವಿನೊಂದಿಗೆ ಕೊಪ್ಪಳದ ಹ್ಯುಮೆನೆಟೇರಿಯನ್‌ ರಿಲೀಫ್‌ ಸೊಸೈಟಿ ಸದಸ್ಯರನ್ನು ಸಂಪರ್ಕಿಸಿದಾಗ ಅಂತ್ಯಸಂಸ್ಕಾರ ನೆರವೇರಿಸಲು ಸಮ್ಮತಿಸಿದ್ದರು.

ಸೊಸೈಟಿಯ ಖಲೀಲ್‌ ಹುಡೇವ್‌ ನೇತೃತ್ವದಲ್ಲಿ ಗವಿಮಠದ ಹಿಂಭಾಗದ ರುದ್ರಭೂಮಿಯ ಚಿತಾಗಾರದಲ್ಲಿ ಹಿಂದೂ ಧರ್ಮದ ಪದ್ಧತಿಯನುಸಾರವೇ ವೃದ್ಧನ ಅಂತ್ಯಸಂಸ್ಕಾರ ನೆರವೇರಿಸಿದರು. ಮೃತ ವೃದ್ಧನ ಅಳಿಯನ ಮೂಲಕವೇ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದ ಬಳಿಕ ಅಂತ್ಯಸಂಸ್ಕಾರದ ಇತರೆ ಜವಾಬ್ದಾರಿಯನ್ನು ಸೊಸೈಟಿ ಸದಸ್ಯರು ನಿರ್ವಹಿಸಿ ಮಾನವೀಯತೆ-ಸಾಮಾಜಿಕ ಕಾಳಜಿ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next