Advertisement

ಮೊದಲ ದಿನದ ಜನತಾ ಕರ್ಫ್ಯೂ ಯಶಸ್ವಿ

01:06 PM Apr 29, 2021 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಜನ ಮೊದಲ ದಿನದಜನತಾ ಕರ್ಫ್ಯೂ ಯಶಸ್ವಿಯಾಗಿ ಪೂರೈಸಿದರು.ಅಲ್ಲಲ್ಲಿ ವಾಹನಗಳ ಜಪ್ತಿ, ವಿನಾಕಾರಣ ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸುವುದು ಸೇರಿದಂತೆ ಸಣ್ಣಪುಟ್ಟ ಅಂಶಗಳನ್ನು ಹೊರತುಪಡಿಸಿದರೆ, ಯಾವುದೇ ಅಹಿತಕರಘಟನೆಗಳು ವರದಿಯಾಗಿಲ್ಲ.

Advertisement

ಈಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗನಿಯಂತ್ರಣಕ್ಕೆಜಾರಿ ಗೊಳಿಸಿದಬಿಗಿ ಕರ್ಫ್ಯೂಗೆಜನ ಕೂಡ ಸಾಥ್‌ನೀಡಿದರು.ಇಡೀ ದಿನ ಜನಸಂಚಾರ ತುಂಬಾವಿರಳವಾ ಗಿತ್ತು. ತುಂಬಿತುಳುಕುತ್ತಿದ್ದ ಬೆಂಗಳೂರುಸೇರಿದಂತೆ ರಾಜ್ಯದ ಪ್ರಮುಖ ನಗರಗಳರಸ್ತೆಗಳು ಬಿಕೋ ಎನ್ನುತ್ತಿದ್ದವು.

ಆಗೊಮ್ಮೆ-ಈಗೊಮ್ಮೆ ಖಾಸಗಿ ವಾಹನಗಳು,ಆಂಬ್ಯುಲೆನ್ಸ್‌, ಹೊಯ್ಸಳದ ಸದ್ದುಕೇಳಿಬರುತ್ತಿದ್ದವು. ಸರ್ಕಾರದ ಸೂಚನೆಯಂತೆಬೆಳಿಗ್ಗೆ 10ರ ಒಳಗೇ ಜನ ಅಂಗಡಿಗಳಿಗೆಮುಗಿಬಿದ್ದು, ದಿನಸಿ ಮತ್ತಿತರ ಅಗತ್ಯವಸ್ತುಗಳನ್ನುಖರೀದಿಸಿದರು.ವೈದ್ಯಕೀಯ, ಬ್ಯಾಂಕಿಂಗ್‌ ಸೇವೆ, ಊರುಗಳಿಗೆತೆರಳುವವರು ಮತ್ತಿತರ ಅಗತ್ಯಕೆಲಸಗಳಿಗೆ ತೆರಳುವವರು ಆಟೋ,ಟ್ಯಾಕ್ಸಿಗಳಲ್ಲಿ ದಾಖಲೆ ಗಳನ್ನು ತೋರಿಸಿಸಂಚರಿಸಿದರು.

ಊರುಗಳ ಪ್ರವೇಶ ದ್ವಾರಗಳಲ್ಲಿಪೊಲೀಸ್‌ ಬಂದೋಬಸ್ತ್ ಬಿಗಿಗೊಳಿಸಲಾಗಿತ್ತು.ಹಾಗಾಗಿ, ರಾತ್ರಿ ನೂರಾರು ಕಿ.ಮೀ. ದೂರದಿಂದಬಂದರೂ ಊರುಗಳಲ್ಲಿ ಪ್ರವೇಶ ಪಡೆಯಲುಹರಸಾಹಸಪಟ್ಟರು.ಮುಂದುವರಿದ ಮಹಾವಲಸೆ: ಈ ಮಧ್ಯೆಕಳೆದೆರಡು ದಿನಗಳಿಂದ ಸಾಗುತ್ತಿರುವ ಮಹಾವಲಸೆ ಬುಧವಾರ ಕೂಡ ಮುಂದುವರಿಯಿತು.

ರೈಲು, ಟ್ಯಾಕ್ಸಿಗಳು, ಸ್ವಂತ ವಾಹನಗಳಲ್ಲಿಬೆಳಗಿನ ಜಾವ ಜನ ನಗರದಿಂದ ಗುಳೇಹೊರಟರು. ಅದೇ ರೀತಿ, ಹುಬ್ಬಳ್ಳಿ,ಮಂಗಳೂರು, ಹಾಸನ, ಚಿಕ್ಕಮಗಳೂರುಸೇರಿದಂತೆ ವಿವಿಧೆಡೆ ಬೀಡು ಬಿಟ್ಟಿರುವ ರಾಜ್ಯಮತ್ತು ಹೊರರಾಜ್ಯಗಳ ಕೂಲಿ ಕಾರ್ಮಿ ಕರುಸ್ವಂತ ಊರುಗಳಿಗೆ ತೆರಳಿದರು.

Advertisement

ಮಹಾನಗರಗಳಲ್ಲಿ ಮುಂದಿನ 2 ವಾರ (ಇದುಮುಂದುವರಿಯಲೂಬಹುದು) ಯಾವುದೇವಾಣಿಜ್ಯ ಚಟುವಟಿಕೆಗಳಿರುವುದಿಲ್ಲ. ದುಡಿಮೆಯೂ ಇಲ್ಲ; ಕೂಲಿಯೂ ಇಲ್ಲದಿದ್ದರೆ, ನಗರದಲ್ಲಿಮನೆಗಳ ಬಾಡಿಗೆ ಪಾವತಿಸಬೇಕು, ಊಟದವ್ಯವಸ್ಥೆ ಸೇರಿದಂತೆ ಎಲ್ಲದಕ್ಕೂ ಅವಲಂಬಿಸಬೇಕಾಗುತ್ತದೆ. ಒಂದು ವೇಳೆ ಆರೋಗ್ಯ ಕೈಕೊಟ್ಟರೆ,ಸಮಸ್ಯೆ ಉಲ್ಬಣಿಸಲಿದೆ. ಆದ್ದರಿಂದ ಊರುಗಳಕಡೆಗೆ ಹೊರಟಿದ್ದೇವೆ ಎಂದು ಬಿಹಾರದ ಪಿಂಟೊ ತಿಳಿಸಿದರು.

ಕಳೆದೆರಡು ದಿನಗಳಿಗೆ ಹೋಲಿಸಿದರೆ, ಬುಧ ವಾರಜನ ಸಂಚಾರ ತುಂಬಾ ವಿರಳವಾಗಿತ್ತು. ಬಹುತೇಕಜನ ಸೋಮವಾರ ಸಂಜೆಯೇ ತಮ್ಮೂರುಗಳಿಗೆತೆರಳಿದ್ದಾರೆ ಎಂದು ನೈರುತ್ಯ ರೈಲ್ವೆ ಬೆಂಗಳೂರುವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next