Advertisement

ಸಬ್ಸಿಡಿ ಕಮಿಟಿ ಮುಂದೆ ಅಧ್ಯಕ್ಷರೇ ಅಭಿನಯಿಸಿದ ಚಿತ್ರ

01:05 AM Jun 27, 2019 | Team Udayavani |

ಬೆಂಗಳೂರು: ಕರ್ನಾಟಕ ಚಲನಚಿತ್ರ ಸಹಾಯಧನ ಆಯ್ಕೆ ಸಮಿತಿಯ ಅಧ್ಯಕ್ಷ ಕೆ.ಎಸ್‌.ಭಗವಾನ್‌ ಅವರ ಆಯ್ಕೆ ಸಮಿತಿಯ ಮುಂದೆ ಭಗವಾನ್‌ ಅವರೇ ನಟಿಸಿರುವ ಚಿತ್ರವೊಂದು ಬಂದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

Advertisement

2017ರಲ್ಲಿ ತೆರೆಗೆ ಬಂದಿದ್ದ ಕೆ.ಎಸ್‌.ಭಗವಾನ್‌ ಅಭಿನಯಿಸಿದ್ದ “ಎರಡು ಕನಸು’ ಚಿತ್ರ ಇದೀಗ ಚಲನಚಿತ್ರ ಸಹಾಯಧನ ಆಯ್ಕೆ ಸಮಿತಿಯ ಮುಂದೆ ಬಂದಿದೆ. ಇಲ್ಲಿಯವರೆಗೆ ಸಹಾಯಧನ ಕೋರಿ ಬಂದಿರುವ ಸುಮಾರು 136 ಚಿತ್ರಗಳನ್ನು ಆಯ್ಕೆ ಸಮಿತಿ ವೀಕ್ಷಿಸಿದ್ದು, ಕಳೆದ ವಾರ ಭಗವಾನ್‌ ಅಭಿನಯದ ಚಿತ್ರ ಕೂಡ ಇದೇ ಸಮಿತಿ ಮುಂದೆ ಬಂದಿತ್ತು.

ಈ ವೇಳೆ ಸಮಿತಿಯ ಅಧ್ಯಕ್ಷ ಭಗವಾನ್‌ ಅವರನ್ನು ಹೊರತುಪಡಿಸಿ ಇತರರು ಚಿತ್ರವನ್ನು ವೀಕ್ಷಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಭಗವಾನ್‌, ಚಿತ್ರದ ಮುಹೂರ್ತದ ವೇಳೆ ಚಿತ್ರೀಕರಿಸಿದ ದೃಶ್ಯವನ್ನು, ಚಿತ್ರದಲ್ಲಿ ಕೇವಲ 14 ಸೆಕೆಂಡ್‌ ಕಾಲ ಬಳಸಿಕೊಳ್ಳಲಾಗಿದೆ.

ಅದನ್ನು ಹೊರತುಪಡಿಸಿದರೆ ನಾನು ಆ ಚಿತ್ರದಲ್ಲಿ ಅಭಿನಯಿಸಿಲ್ಲ. ಸರಕಾರ ಸೂಚಿಸಿದರೆ, ಮುಂದೆ ಈ ಸಹಾಯಧನ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಹೊರಬರಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next