Advertisement

ಬಿಜೆಪಿ ಸೋಲಿಸಿ ಸಂವಿಧಾನ ರಕ್ಷಿಸಲು ಹೋರಾಟ: ಸಚಿವ ಖಾದರ್‌

11:46 PM Mar 26, 2019 | Team Udayavani |

ಕುಂಬಳೆ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ಸರಕಾರವನ್ನು ಅಧಿಕಾರದಿಂದ ಇಳಿಸುವುದು ಮಾತ್ರವಲ್ಲದೆ ದೇಶದ ಸಂವಿಧಾನವನ್ನು ಸಂರಕ್ಷಿಸಲಿರುವ ಹೋರಾಟವೆಂಬುದಾಗಿ ಕರ್ನಾಟಕ ಸರಕಾರದ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಉಪ್ಪಳದ ಮರಿಕ್ಕೆ ಸಭಾಭವನದಲ್ಲಿ ಜರಗಿದ ಮಂಜೇಶ್ವರ ಮಂಡಲ ಐಕ್ಯರಂಗ ಚುನಾವಣ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐಕ್ಯರಂಗ ಜಿಲ್ಲಾ ಸಂಚಾಲಕ ಎಂ.ಸಿ. ಕಮರುದೀªನ್‌ ಮಾತನಾಡಿ ಕೇಂದ್ರ ಸರಕಾರದ ಆಡಳಿತ ವಿಫಲವಾಗಿದ್ದು ವಅಕ್ರಮ ರಾಜಕೀಯ, ನೋಟು ಆಪನಗದೀಕರಣ, ಜಿ.ಎಸ್‌. ಟಿ. ತೆರಿಗೆ ಹೇರಿಕೆಯಿಂದ ಜನರ ಜೀವನ ದುಸ್ತರವಾಗಿರುವುದಾಗಿ ಆರೋಪಿಸಿದರು. ಪ್ರಧಾನಿ ಬಡವರ ಏಳಿಗೆಗೆ ಬಯಸದೆ ಶ್ರೀಮಂತರ ಕಾವಲುಗಾರರಾಗಿರುವರೆಂದರು.

ಐಕ್ಯರಂಗ ಮಂಡಲ ಅಧ್ಯಕ್ಷ ಟಿ.ಎ. ಮೂಸಾ ಅಧ್ಯಕ್ಷತೆ ವಹಿಸಿದರು.
ಕಾಸರಗೋಡು ಲೋಕಸಭಾ ಐಕ್ಯರಂಗದ ಅಭ್ಯರ್ಥಿ ರಾಜಮೋಹನ್‌ ಉಣ್ಣಿತ್ತಾನ್‌, ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು, ಮಾಜಿ ಸಚಿವ ಸಿ.ಟಿ. ಅಹಮ್ಮದಾಲಿ, ಮಾಜಿ ಶಾಸಕ ಕೆ.ಪಿ. ಕುಂಞಿಕಣ್ಣನ್‌, ಐಕ್ಯರಂಗದ ನಾಯಕರಾದ ಎ.ಗೋವಿಂದನ್‌ ನಾಯರ್‌, ಕೆ. ನೀಲಕಂಠನ್‌, ಹಕೀಂ ಕುನಿಲ್‌, ಕಲ್ಲಟ್ಟÅ ಮಾಹಿನ್‌ ಹಾಜಿ, ಅಜೀಜ್‌ ಮರಿಕ್ಕೆ,ಪಿ.ಎಂ.ಮುನೀರ್‌ ಹಾಜಿ,ಎ.ಜಿ.ಸಿ ಬಶೀರ್‌, ನ್ಯಾಯವಾದಿ ಎ.ಗೋವಿಂದನ್‌ ನಾಯರ್‌, ನ್ಯಾಯವಾದಿ ಬಿ. ಸುಬ್ಬಯ್ಯ ರೈ, ಸುಂದರ ಆರಿಕ್ಕಾಡಿ, ಎ.ಕೆ.ಎಂ. ಅಶ್ರಫ್‌, ಟಿ.ಡಿ. ಕಬೀರ್‌, ಪಿ.ಎ. ಅಶ್ರಫ್‌ ಆಲಿ, ಕೆ. ಸಾಮಿ ಕುಟ್ಟಿ, ಹರ್ಷಾದ್‌, ಡಿ.ಎಂ.ಕೆ. ಮಹಮ್ಮದ್‌, ಎಂ. ಅಬ್ಟಾಸ್‌, ಯು.ಕೆ. ಸೈಫುಲ್ಲ ತಂಙಳ್‌, ಸಯ್ಯದ್‌ ಹಾದಿ ತಂಙಳ್‌, ಎ.ಕೆ. ಆರೀಫ್‌, ಗೋಲ್ಡನ್‌ ರಹಿಮಾನ್‌, ಕುರ್ಯಾಕೋಸ್‌, ವಿ. ಕಮ್ಮಾರನ್‌, ಕರಿವಳ್ಳೂರು ವಿಜಯನ್‌, ಸಜಿ ಸೆಬಾಸ್ಟಿಯನ್‌, ಹರೀಶ್‌ ಬಿ. ನಂಬ್ಯಾರ್‌, ಮುನೀರ್‌, ರಾಘವ ಚೇರಾಲ್‌, ಕೆ.ಪಿ. ಮುನೀರ್‌ ಉಪಸ್ಥಿತರಿದ್ದರು.
ಸಮಾವೇಶದಲ್ಲಿ ಐಕ್ಯರಂಗದ ಮಂಜೇಶ್ವರ ಮಂಡಲ ಚುನಾವಣ ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ಅಧ್ಯಕ್ಷರಾಗಿ ಟಿ.ಎ. ಮೂಸಾ, ಕಾರ್ಯಾಧ್ಯಕ್ಷರಾಗಿ ಎಂ. ಅಬ್ಟಾಸ್‌ ಪ್ರಧಾನ ಸಂಚಾಲಕರಾಗಿ ಎಂ. ಮಂಜುನಾಥ ಆಳ್ವ, ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ಕೆ. ಸಾಮಿಕುಟ್ಟಿ ಅವರನ್ನೊಳಗೊಂಡ 1001 ಸದಸ್ಯರನ್ನು ಹೊಂದಿದ ಚುನಾವಣ ಸಮಿತಿಯನ್ನು ರಚಿಸಲಾಯಿತು.

ಪ್ರಮುಖರೆಲ್ಲರೂ ಆರೆಸ್ಸೆಸ್‌
ಕಳೆದ 5 ವರ್ಷಗಳ ಆಡಳಿತದಲ್ಲಿ ಕೇಂದ್ರದ ಬಿಜೆಪಿ ಸರಕಾರ ಸರ್ವತ್ರ ವಿಫಲವಾಗಿದೆ. ದೇಶದ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿಯವರೆಲ್ಲರೂ ಆರ್‌.ಎಸ್‌.ಎಸ್‌.ನವರಾಗಿದ್ದು ಸಂಘ ಪರಿವಾರದ ಅಜೆಂಡಾದಲ್ಲಿ ಅಧಿಕಾರ ನಡೆಸುವ ಸರಕಾರ ಅಧಿಕಾರಕ್ಕೇರಿದಲ್ಲಿ ಭಾರತದ ಸಂವಿಧಾನÊನ್ನೇ ತಿದ್ದಿ ಮುಂದೆ ಚುನಾವಣೆಯೇ ನಡೆಯದಂತೆ ಮಾಡಲಿದೆ ಎಂದು ಖಾದರ್‌ ಹೇಳಿದ‌ರು.

Advertisement
Advertisement

Udayavani is now on Telegram. Click here to join our channel and stay updated with the latest news.

Next