Advertisement

ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಅನಿವಾರ್ಯ

07:45 PM Oct 02, 2020 | Suhan S |

ಹಿರಿಯೂರು: ವಿವಿ ಸಾಗರದ ಜಲಾಶಯದಲ್ಲಿ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಇರುವುದನ್ನು ಖಂಡಿಸಿ ಭ್ರಷ್ಟಾಚಾರ ವಿರೋಧಿ ವೇದಿಕೆ ನೇತೃತ್ವದಲ್ಲಿ ವಾಣಿವಿಲಾಸಪುರ ಗ್ರಾಮದಲ್ಲಿ ಸಭೆ ನಡೆಸಲಾಯಿತು.

Advertisement

ವೇದಿಕೆಯ ಗೌರವಾಧ್ಯಕ್ಷ ಗುರುಪಾದಯ್ಯ ಮಠದ್‌ ಹೊನ್ನಾಳಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ನ್ಯಾಯಕ್ಕಾಗಿ, ಹಕ್ಕುಗಳಿಗಾಗಿ ಹೋರಾಟ ಮಾಡಲೇಬೇಕಾಗುತ್ತದೆ. ಇದರ ಹಿಂದೆ ಯಾವುದೇ ದುರುದ್ದೇಶ ಇರುವುದಿಲ್ಲ. ಸಾಮಾಜಿಕ ಕಳಕಳಿಯನ್ನುಹೊಂದಿ, ನ್ಯಾಯದ ಪರ ನಮ್ಮ ವೇದಿಕೆ ಸದಾ ಹೋರಾಟಕ್ಕೆ ಕಂಕಣ ಬದ್ಧವಾಗಿದೆಯಂದರು. ಭೂ ಹಕ್ಕುದಾರರ ವೇದಿಕೆಯ ರಾಜ್ಯ ಸಂಚಾಲಕ ಕೆ.ಬಿ. ರೂಪ ನಾಯ್ಕ ಮಾತನಾಡಿ, ಪ್ರಜಾಪ್ರಭತ್ವದಲ್ಲಿ ಎಲ್ಲರಿಗೂ ಸಮನಾದ ಹಕ್ಕುಗಳು ಇವೆ, ಅವುಗಳನ್ನುಪಡೆಯುವಂತಹ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಬೇಕಾದರೆ ಬೃಹತ್‌ ಯೋಜನೆಗಳು ಅನುಷ್ಠಾನಗೊಳ್ಳಲು ಹೋರಾಟಗಾರರಿಗೆ ಸಾರ್ವಜನಿಕರ ಬೆಂಬಲ, ಸಹಕಾರ ಅತ್ಯಗತ್ಯ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ರಾಜ್ಯಾಧ್ಯಕ್ಷ ಎ. ಉಮೇಶ್‌ ಮಾತನಾಡಿ, ಹೋರಾಟದ ಫಲವಾಗಿ  ವಿವಿ ಸಾಗರದ ನೀರನ್ನು 100 ವರ್ಷಗಳ ನಂತರ ಕುಡಿಯುವಂತಾಗಿದೆ.ವಿವಿ ಸಾಗರ ಜಲಾಶಯದಲ್ಲಿ ಪ್ರವಾಸೋದ್ಯಮ ಇಲಾಖೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸೌಲಭ್ಯಗಳ ಕೊರತೆಯಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಸ್ಥಳೀಯರಿಗೆಉದ್ಯೋಗವಕಾಶ ದೊರೆತು ವ್ಯಾಪಾರ ವಹಿವಾಟು ಉತ್ತಮಗೊಳ್ಳಬೇಕಿದೆ ಎಂದು ತಿಳಿಸಿದರು. ಬಿ.ಎಲ್‌. ಶಾಂತರಾಜ್‌, ವೀರಭದ್ರಸ್ವಾಮಿ, ಶಿವಕುಮಾರ್‌, ಲೋಕೇಶ್‌, ಕೆಂಚರಾಯಪ್ಪ, ಮೂರ್ತಿ, ಮಂಜುನಾಥ್‌, ತಿಪ್ಪೇಶ್‌ ನಾಯ್ಕ, ವೀರಭದ್ರಪ್ಪ, ಬಿ. ರಾಮಪ್ಪ, ಬಸವರಾಜು, ಕಲೀಮ್‌ ಸಾಬ್‌, ರವಿ ಗೌಡ, ರಘು, ರಾಘವೇಂದ್ರ, ಶೇಖರಪ್ಪ, ಮಂಜುನಾಥ್‌, ನರೇಂದ್ರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next