Advertisement

Clay Pots: ಮಣ್ಣಿನ ಮಡಕೆಯಲ್ಲಿದೆ ಜೀವ ಸಾರ

03:52 PM Sep 01, 2024 | Team Udayavani |

ಜೀವನಶೈಲಿ ಬದಲಾಗಿದೆ. ಒತ್ತಡದ ಬದುಕು, ಆರಾಮದಾಯಕವಲ್ಲದ ಆಹಾರ, ಗಾಳಿ, ನೀರು ಮತ್ತು ಪರಿಸರ ಆರೋಗ್ಯವನ್ನು ಹದಗೆಡುವಂತೆ ಮಾಡುತ್ತಿದೆ.

Advertisement

ಮನುಷ್ಯನಿಗೆ ಆರೋಗ್ಯ ಚೆನ್ನಾಗಿದ್ದರೆ ಜಗತ್ತು ಸುಂದರ. ಅದೇ ಆರೋಗ್ಯ ಹದಗೆಟ್ಟು ಬಿಟ್ಟರೆ, ಬದುಕು ನರಕವೇ ಸರಿ. ಕೆಲವೊಂದು ಕಾಯಿಲೆಗಳು ಯಾತನೆಯಲ್ಲಿ ನರಳುವಂತೆ ಮಾಡುತ್ತದೆ. ನಾವು ಸೇವಿಸುವ ಆಹಾರದಲ್ಲಿ ನಮ್ಮ ಆರೋಗ್ಯವಿದೆ. ಆಹಾರ ಸತ್ವಭರಿತವಾಗಿರಬೇಕು ಮತ್ತು ಪೋಷಕಾಂಶಯುಕ್ತವಾಗಿರಬೇಕು. ಇಂದಿನ ದಿನಗಳಲ್ಲಿ ಕಲಬೆರಕೆ ಮತ್ತು ರಾಸಾಯನಿಕಗಳೇ ಹೆಚ್ಚು.

ಮೃಷ್ಟಾನ್ನಭೋಜನವಿದ್ದರೆ ಏನು ಪ್ರಯೋಜನ, ಅದನ್ನು ಅರಗಿಸಿಕೊಳ್ಳುವ ಶಕ್ತಿ ಇಲ್ಲದ ಮೇಲೆ? ನಮ್ಮ ಆರೋಗ್ಯ ಹಾಳಾಗುತ್ತಿರುವುದಕ್ಕೆ ಕಾರಣಗಳು ನಾವು ಬಳಸುವ ಪಾತ್ರೆ, ಗ್ಯಾಸ್‌, ರಾಸಾಯನಿಕ ಸಿಂಪಡಿಸಿದ ತರಕಾರಿ, ಹಣ್ಣುಗಳು, ಕುಡಿಯುವ ನೀರು ಇತ್ಯಾದಿ.

ಹಿಂದಿನ ಕಾಲದಲ್ಲಿ ಅಡುಗೆ ಮಾಡುತ್ತಿದ್ದ ಮಣ್ಣಿನ ಮಡಿಕೆಯಲ್ಲಿ ಸತ್ವವಿತ್ತು. ಅದ್ಭುತ ರುಚಿ ಇರುತ್ತಿತ್ತು. ಮಣ್ಣಿನ ಮಡಕೆಯಲ್ಲಿ ಕ್ಯಾಲ್ಸಿಯಂ, ಮೆಗ್ನಿàಷಿಯಂ, ಕಬ್ಬಿಣದಂತಹ ಆರೋಗ್ಯಕ್ಕೆ ಪುಷ್ಠಿ ಕೊಡುವ ಅಂಶವಿರುತ್ತದೆ. ಪಿ.ಎಚ್‌. (ಆಹಾರದಲ್ಲಿರುವ ಅಮ್ಲಿàಯತೆ) ಅನ್ನು ಇದು ಸಮತೋಲನಗೊಳಿಸುತ್ತದೆ. ಈ ಮೂಲಕ ನಾವು ಆರೋಗ್ಯವಂತರಾಗಿರುತ್ತಿದ್ದೆವು.

ಮಣ್ಣಿನ ಮಡಕೆಯಿಂದ ಮಾಡಿದ ಆಹಾರ ಮತ್ತು ಮಣ್ಣಿನ ಮಡಕೆಯ ನೀರು ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು ಸೂಕ್ತವಾಗಿದೆ ಮತ್ತು ಜೀರ್ಣ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಪ್ಲಾಸ್ಟಿಕ್‌ ಬಾಟಲಿ ನೀರಿನಲ್ಲಿ ಪ್ಲಾಸ್ಟಿಕ್‌ನ ಸಣ್ಣ ಸಣ್ಣ ಕಣ ಸೇರಿಕೊಂಡಿರುತ್ತವೆ. ಇದರಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುವುದಂತು ಖಂಡಿತ.

Advertisement

ಇಂದಿನ ದಿನಗಳಲ್ಲಿ ಮಣ್ಣಿನ ಮಡಕೆಗಳು ಕಣ್ಮರೆಯಾಗುತ್ತಿದೆ. ಇಂದು ಇವು ಕೇವಲ ಅಗತ್ಯ ಶಾಸ್ತ್ರ ಸಂಪ್ರದಾಯಗಳಿಗೆ, ಅಲಂಕಾರಿಕ ವಸ್ತುವಾಗಿ ಮಾತ್ರ ಬಳಸಲಾಗುತ್ತಿದೆ. ಈ ಮಣ್ಣಿನ ಮಡಕೆಯಲ್ಲಿ ಮಾಡಿದ ಆಹಾರ ಖಾದ್ಯಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದೇ ಕಾರಣದಿಂದ ನಮ್ಮ ಪೂರ್ವಜರು ಆರೋಗ್ಯವಂತರಾಗಿರುತ್ತಿದ್ದರು. ಆದರೆ ಇಂದಿನ ಯುಗದ ಜನರು  ಬಗೆ  ಬಗೆಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ಮಣ್ಣು ನಮ್ಮ ಜೀವ ಉಳಿಸುವ ಸಂಜೀವಿನಿ. ಮಣ್ಣು ನಮ್ಮ ಜೀವ ಮತ್ತು ಜೀವನದ ಸಾರ. ಇನ್ನಾದರೂ ಮಣ್ಣಿನ ಮಡಕೆಗಳು ಉಸಿರಾಡಲಿ. ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಣ್ಣಿನ ಮಡಕೆಗಳನ್ನು ಬಳಸುವುದು ಅತ್ಯಗತ್ಯ.

- ವಾಣಿ

ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next