Advertisement

ಅಂಕ ಗಳಿಕೆಗೆ ಆರ್ಥಿಕತೆ ಅಡ್ಡಿಯಲ್ಲ

11:19 AM May 28, 2018 | Team Udayavani |

ಮಂಗಳೂರು: ತಂದೆ ಆಟೋ ಚಾಲಕ. ತಾಯಿ ಬೀಡಿ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕಷ್ಟದ ನಡುವೆ ಬದುಕು. ಆದರೆ ಆಕೆಯ ವಿದ್ಯಾ ಸಾಧನೆಗೆ ಈ ಕಷ್ಟ ಯಾವ ಅಡ್ಡಿಯನ್ನೂ ಒಡ್ಡಿಲ್ಲ. ಎಸೆಸೆಲ್ಸಿಯಲ್ಲಿ 587 ಅಂಕ ಗಳಿಸುವ ಮೂಲಕ ಸಾಧಕಿಯಾಗಿದ್ದಾಳೆ ಶ್ವೇತಾ.

Advertisement

ಮೂಲ್ಕಿ ವೆಂಕಟರಮಣ ದೇವಸ್ಥಾನ ಬಳಿಯ ನಿವಾಸಿ ಶ್ವೇತಾ ಕೋಟ್ಯಾನ್‌ ಗೆ ಮುಂದೆ ವಾಣಿಜ್ಯ ವಿಭಾಗದಲ್ಲಿ ಓದುವ ಹಂಬಲ. ತಂದೆ ಸತೀಶ್‌ ಕೋಟ್ಯಾನ್‌ (ದೂರವಾಣಿ 9611355142) ಆಟೋ ಚಾಲಕರು, ತಾಯಿ ಪ್ರಮೀಳಾ ಬೀಡಿ ಕಟ್ಟುತ್ತಾರೆ. ಅಕ್ಕ ಸ್ವಾತಿ ಅಂತಿಮ ಬಿಕಾಂ ವಿದ್ಯಾರ್ಥಿನಿಯಾಗಿದ್ದಾರೆ. ಆರ್ಥಿಕವಾಗಿ ಅಷ್ಟೇನೂ ಸದೃಢವಾಗಿರದ ಈ ಕುಟುಂಬಕ್ಕೆ ತಂದೆ-ತಾಯಿಯ ದಿನದ ದುಡಿಮೆಯಲ್ಲಿ ಬದುಕು ಹಾಗೂ ಇಬ್ಬರು ಹೆಣ್ಣುಮಕ್ಕಳ ವಿದ್ಯಾಭ್ಯಾಸ ಸಾಗಬೇಕು. ಆದರೆ ಕಲಿಕೆಯ ಸಾಧನೆಗೆ ಬಡತನ ಅಡ್ಡಿಯಲ್ಲ ಎಂಬುದನ್ನು ಶ್ವೇತಾ ತೋರಿಸಿಕೊಟ್ಟಿದ್ದಾರೆ.

ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ ಶ್ರಾವ್ಯಾ ಗಣಿತ ಹೊರತುಪಡಿಸಿ ಉಳಿದ ಯಾವುದೇ ವಿಷಯಗಳಿಗೂ ಕೋಚಿಂಗ್‌ ಪಡೆದುಕೊಂಡಿಲ್ಲ. 

ಹೆತ್ತವರ ಪ್ರೇರಣೆ‌
ತಂದೆ ತಾಯಿ ಕಷ್ಟ ಪಟ್ಟು ಕಲಿಸುತ್ತಿದ್ದಾರೆ. ಅವರ ಶ್ರಮಕ್ಕೆ ತಕ್ಕ ಹಾಗೆ ನಾನು ಕಲಿಯುತ್ತಿದ್ದೇನೆ. ಮುಂದೆ ವಾಣಿಜ್ಯ ವಿಭಾಗ ಆಯ್ಕೆ ಮಾಡಿಕೊಂಡು ಆ ಕ್ಷೇತ್ರದಲ್ಲಿಯೇ ಮುಂದುವರಿಯಬೇಕೆಂದಿದ್ದೇನೆ.
– ಶ್ವೇತಾ

Advertisement

Udayavani is now on Telegram. Click here to join our channel and stay updated with the latest news.

Next