Advertisement

Mudhol: ಚಾಲಕನಿಗೆ ತಲೆಸುತ್ತು : ಹೊಲಕ್ಕೆ‌ ನುಗ್ಗಿದ‌ ಬಸ್

12:48 PM Aug 11, 2024 | Team Udayavani |

ಮುಧೋಳ : ಬಸ್ ಚಾಲನೆ ವೇಳೆ ಚಾಲಕನಿಗೆ ತಲೆಸುತ್ತು ಬಂದಕಾರಣ ಬಸ್ ಹೊಲಕ್ಕೆ‌ ನುಗ್ಗಿರುವ ಘಟನೆ ಶಿರೋಳ ಗ್ರಾಮದ ಬಳಿ ನಡೆದಿದೆ.

Advertisement

ವಿಜಯಪುರದಿಂದ ಅಂಕೋಲಕ್ಕೆ ತೆರಳುತ್ತಿದ್ದ ಬಸ್ ಜಮಖಂಡಿಯಿಂದ ಮುಧೋಳಕ್ಕೆ ಬರುತ್ತಿದ್ದಂತೆ ಶಿರೋಳ ಗ್ರಾಮದ ಬಳಿ ಚಾಲಕನಿಗೆ ತಲೆ ಸುತ್ತು ಬಂದಿದೆ. ಕೂಡಲೇ ಚಾಲಕ ಬಸ್ ನ್ನು ಹೊಲಕ್ಕೆ ನುಗ್ಗಿಸಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ತಲೆಸುತ್ತು ಬಂದರೂ ಕರ್ತವ್ಯ ಪ್ರಜ್ಞೆ ಮೆರೆದ ಚಾಲಕ ಬಸನ್ನು ಹೊಲಕ್ಕೆ ನುಗ್ಗಿಸಿದ್ದಾನೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಪ್ರಯಣಿಕರಿಗೆ ಬದಲಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next