Advertisement

KSRTC BUS; ಟೋಲ್ ತಪ್ಪಿಸಲೆಂದು ನಡು ರಸ್ತೆಯಲ್ಲೇ ಬಸ್ ತಿರುಗಿಸಿದ ಚಾಲಕ

06:04 PM Jul 31, 2023 | Team Udayavani |

ರಾಮನಗರ: ಟೋಲ್ ಗೇಟ್ ತಪ್ಪಿಸಲೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನೋರ್ವ ನಡು ರಸ್ತೆಯಲ್ಲೇ ಬಸ್ಸನ್ನು ಯೂ ಟರ್ನ್ ಮಾಡಿದ ಘಟನೆ ನಡೆದಿದೆ. ಬೆಂಗಳೂರು- ಮೈಸೂರು ಹೆದ್ದಾರಿಯ ಬಿಡದಿ ಸಮೀಪದಲ್ಲಿ ಈ ಘಟನೆ ನಡೆದಿದೆ.

Advertisement

ಕೆಎ 42 F 2233 ನಂಬರಿನ ಕೆಎಸ್ಆರ್ ಟಿಸಿ ಬಸ್ ಚಾಲಕ ಟೋಲ್ ಉಳಿಸುವ ಕಾರಣಕ್ಕೆ ಯೂ ಟರ್ನ್ ಮಾಡಿದ್ದಾರೆ. ಟೋಲ್ ನಿಂದ ಬಚಾವ್ ಆಗಲೆಂದು ಪ್ರಯಾಣಿಕರ ಪ್ರಾಣವನ್ನು ಅಪಾಯಕ್ಕೆ ತಳ್ಳಿದ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ:ಷರತ್ತು ಹಾಕಿಯೇ ಬಿಜೆಪಿಯೊಂದಿಗೆ ಸರಕಾರ ರಚಿಸಿದ್ದೆವು..: ಮೆಹಬೂಬಾ ಮುಫ್ತಿ

ಬಸ್ ಹಿಂದೆ ಬರುತ್ತಿದ್ದ ವಾಹನ ಸವಾರರೂ ಬಸ್ ಚಾಲಕನ ಈ ಅವಾಂತರದಿಂದ ಗಲಿಬಿಲಿಗೊಂಡಿದ್ದು, ಸಾಮಾಜಿಕ ಜಾಲಾತಣದಲ್ಲಿ ವಾಹನ ಸವಾರರು ವಿಡಿಯೋ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟ್ವಿಟ್ಟರ್ ಗೆ ವಿಡಿಯೋ ಟ್ಯಾಗ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next