Advertisement

ಈ ಮಟ್ಟಕ್ಕೆ ಬರಲು ತಂದೆಯವರು ಕಲಿಸಿಕೊಟ್ಟ ಶಿಸ್ತೇ ಕಾರಣ: ಡಾ. ರಾಜ್

08:51 AM Jul 05, 2020 | Lakshmi GovindaRaj |

ಇಂದು ನಾನು ಈ ಮಟ್ಟಕ್ಕೆ ಬರಲು ನಮ್ಮ ತಂದೆಯವರು ಕಲಿಸಿಕೊಟ್ಟ ಶಿಸ್ತೇ ಕಾರಣ. ಅವರು ಯಾವಾಗಲೂ ನನ್ನನ್ನು ಹೆದರಿಸುತ್ತಿದ್ದರು. ನನ್ನ ಗುಣ, ಮಾತು, ನಡವಳಿಕೆಯನ್ನು ಗಮನಿಸಿ ಇದನ್ನು ತಿದ್ದಿಕೋ ಎಂದು ಹೇಳುತ್ತಿದ್ದರು. ಜೊತೆಗೆ ನಿಮ್ಮನ್ನು ಓದಿಸಲು ನನ್ನ ಕೈಲಿ ಆಗಲಿಲ್ಲ. ಆದ್ದರಿಂದ ಹೆದರಿಸುತ್ತೇನೆ. ನನ್ನ ಮಾತಿನ ಪರಿಣಾಮವನ್ನು ನೀನು ಮುಂದೆ ನೋಡುತ್ತೀಯಾ ಎಂದು ತಮ್ಮ ತಂದೆ  ಸಿಂಗನಲ್ಲೂರು ಪುಟ್ಟಸ್ವಾಮಿಯವರ ಬಗ್ಗೆ ವರನಟ ‌ಡಾ.ರಾಜಕುಮಾರ್‌ ಮಾತಾನಾಡುತ್ತಿರುವ ವಿಡಿಯೋವೊಂದನ್ನು ಮಗ ರಾಘವೇಂದ್ರ ರಾಜ್‌ಕುಮಾರ್ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisement

ಹೌದು! ನಟ ರಾಘವೇಂದ್ರ ರಾಜ್‌ಕುಮಾರ್, ಡಾ. ರಾಜ್‌ಕುಮಾರ್ ಅವರ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಿಯವರ ಬಗ್ಗೆ, ಜೀವನಕ್ಕೆ ಹಾಗೂ ಬಣ್ಣದ ಬದುಕಿಗೆ ಅವರು ಕೊಟ್ಟ ಮಾರ್ಗದರ್ಶನದ ಬಗ್ಗೆ ನಗುನಗುತ್ತಾ ಅಂದು  ಫೋನ್‌ನಲ್ಲಿ ಮಾತನಾಡುತ್ತಿರುವ ಅಪರೂಪದಲ್ಲಿ ಅಪರೂಪದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮುಖ್ಯವಾಗಿ ನಾನು ದೇವರನ್ನು ನೋಡಿದ್ದೇನೆ. ಆ ದೇವರು ಯಾರೆಂದರೆ ಅಭಿಮಾನಿಗಳೇ ನನ್ನ ದೇವರು ಎಂದು ಹೇಳಿದ್ದನ್ನು ರಾಜ್‍ಕುಮಾರ್ ಅವರು ಸಂಭಾಷಣೆ ವೇಳೆ ನೆನಪಿಸಿಕೊಂಡಿದ್ದಾರೆ. ಅಲ್ಲದೇ ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next