Advertisement

ಹುಳಿಯಾರು ಜನತೆಗೆ ನಿರಾಸೆ ಮೂಡಿಸಿದ ಬಜೆಟ್

06:56 AM Feb 09, 2019 | |

ಹುಳಿಯಾರು: ಪ್ರತಿ ಬಾರಿಯ ಬಜೆಟ್ ಮಂಡಿಸುವಾಗಲೂ ಹುಳಿಯಾರು ಜನತೆ ನಿರೀಕ್ಷಿಸಿದಂತೆ ಈ ಬಾರಿಯ ಬಜೆಟ್‌ನಲ್ಲಾದರೂ ಹುಳಿಯಾರನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸ ಬಹುದೆಂದು ನಿರೀಕ್ಷಿಸಿದ್ದರು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಹುಳಿಯಾರು ಜನತೆಗೆ ನಿರಾಸೆ ಮೂಡಿಸಿದ್ದಾರೆ.

Advertisement

ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ: ಈ ಹಿಂದೆಯೇ ಹುಂಡೇಕರ್‌, ಗದ್ದಿ ಗೌಡರ್‌ ಸಮಿತಿ ಸೇರಿದಂತೆ ಹಿಂದಿನ ಎಲ್ಲಾ ಆಯೋಗದ ಸಮಿತಿಗಳು ಹುಳಿಯಾರನ್ನು ತಾಲೂಕು ಆಗುವುದಕ್ಕೆ ಸೂಕ್ತ ಎಂದು ವರದಿ ಮಾಡಿದ್ದರೂ ಇದುವರೆಗೂ ತಾಲೂಕು ಮಾಡುವ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. 1919ರಲ್ಲಿ ಹುಳಿಯಾರು ತಾಲೂಕು ಕೇಂದ್ರವಾಗಿದ್ದಕ್ಕೆ ದಾಖಲೆ ಪತ್ರಗಳಿವೆ.

ತಾಲೂಕು ಆಗಬೇಕಿತ್ತು: ತಾಲೂಕು ಆಗುವ ಎಲ್ಲ ಅರ್ಹತೆ ಹೊಂದಿದ್ದರೂ ಯಾವ ಸರ್ಕಾರವೂ ಗಂಭೀರವಾಗಿ ಪರಿಗಣಿಸಿಲ್ಲ. ಹೋಬಳಿ ಕೇಂದ್ರವಾಗಿರುವ ಹುಳಿಯಾರು ಸದ‌್ಯ ತಾಲೂಕು ಕೇಂದ್ರ ಮೀರಿ ಬೆಳೆದಿದ್ದು, ಜನಸಂಖ್ಯಾ ಆಧಾರದ ಮೇಲೆ ತಾಲೂಕು ಆಗ ಬೇಕಿತ್ತು. ಇದಕ್ಕಾಗಿ ಹೋರಾಟ, ಪ್ರತಿಭಟನೆ, ಬಂದ್‌ ಮಾಡಲಾಗಿತ್ತು.

ಈಗ ಕುಮಾರಸ್ವಾಮಿಯವರು 4 ಹೊಸ ತಾಲೂಕು ರಚಿಸುವುದಾಗಿ ಹೇಳಿದ್ದು, ಅವರೂ ಹುಳಿಯಾರು ಬಗ್ಗೆ ಪ್ರಸ್ತಾಪಿಸದಿರುವುದು ಬಹುಕಾಲದ ಬೇಡಿಕೆಗೆ ಕೊನೆಗೂ ಮಾನ್ಯತೆ ಇಲ್ಲದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next