Advertisement

ಭಕ್ತರ ಒತ್ತಾಸೆಯಿಂದ ಕಣಕ್ಕಿಳಿಯಲು ಸಿದ್ಧತೆ 

07:35 AM Jan 16, 2018 | |

ಜಮಖಂಡಿ: ಆರನೇ ವಯಸ್ಸಿನಲ್ಲಿ ಆರ್‌ಎಸ್‌ಎಸ್‌ನಲ್ಲಿ ಗುರುತಿಸಿಕೊಂಡು ಜನೋಪಯೋಗಿ ಕೆಲಸ ಮಾಡಿದ್ದೇನೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ಬಿಜೆಪಿ ವರಿಷ್ಠರು ಹಸಿರು ನಿಶಾನೆ ತೋರಿದ್ದರ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಬರಲು ಮಾನಸಿಕವಾಗಿ ಸಿದ್ಧತೆ ಮಾಡುತ್ತಿದ್ದೇನೆ ಎಂದು ಕಾಂತಲಿಂಗೇಶ್ವರ ಮಹಾರಾಜರು ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮಖಂಡಿ ಕ್ಷೇತ್ರದ ಬಿದರಿ ನಿವಾಸಿಯಾಗಿದ್ದು, ವಿಜಯಪುರದಲ್ಲಿ ಸಿಪಿಇಡಿ ಮುಗಿಸಿದ್ದೇನೆ. ಪ್ರಸಕ್ತ ಬಿದರಿ ಗ್ರಾಮದ ಸ್ವಂತ ಹೊಲದಲ್ಲಿ ಆಶ್ರಮ ನಿರ್ಮಿಸಿ ರೋಗ ರುಜಿನ, ಅಶಾಂತಿ
ಮನಃಸ್ಥಿತಿಯವರಿಗೆ ಸಾಂತ್ವನ ಗುರುವಾಗಿ ನೊಂದವರ ಮೊಗದಲ್ಲಿ ನಗು ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಆಶ್ರಮದಲ್ಲಿ ಆರ್ಯುವೇದ ಗಿಡಮೂಲಿಕೆ ಸಸ್ಯ ಬೆಳೆದು ವಿವಿಧ ರೋಗದಿಂದ ಬಳಲುತ್ತಿರುವರಿಗೆ ಉಚಿತ ಔಷಧ ನೀಡುತ್ತಿದ್ದೇನೆ. ಯಾವುದೇ ಸರ್ಕಾರ, ದಾನಿಗಳ ನೆರವಿಲ್ಲದೆ ಆಶ್ರಮಕ್ಕೆ ಆಗಮಿಸುವ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದ್ದು, ಪಕ್ಕದ ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಮಠದ ಭಕ್ತರಿದ್ದಾರೆ. 20 ವರ್ಷಗಳಿಂದ ಜನಸಾಮಾನ್ಯರ ಕಷ್ಟ- ಸುಖದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಜನರು ರಾಜಕೀಯಕ್ಕೆ ಬರಲು ಒತ್ತಾಯಿಸುತ್ತಿದ್ದಾರೆ ಎಂದರು.

ಪ್ರಧಾನಿ ಮೋದಿ ಅವರ ಸ್ಪಷ್ಟ, ನಿಖರ, ನಿರ್ಭಿತಿ, ಜನೋಪಯೋಗಿ ಆಡಳಿತ ಹಾಗೂ ಉತ್ತರ ಪ್ರದೇಶದ
ಯೋಗಿ ಆದಿತ್ಯನಾಥ ಆಡಳಿತ ದೇಶದ ಜನತೆ ಮನಸೂರೆಗೊಂಡಿದೆ. 20 ವರ್ಷಗಳಿಂದ ಜನಸಾಮಾನ್ಯರ ಕಷ್ಟ- ಸುಖದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಜನರು ರಾಜಕೀಯಕ್ಕೆ ಬರಲು ಒತ್ತಾಯಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next