Advertisement

ವಿವಿಧ ಕೇಸಲ್ಲಿ ವಶಕ್ಕೆ ಪಡೆದಿದ್ದ 334 ಲೀಟರ್‌ ಮದ್ಯ ನಾಶ

07:33 AM Feb 15, 2019 | Team Udayavani |

ಹುಣಸೂರು: ಹುಣಸೂರು ವಲಯ ವ್ಯಾಪ್ತಿಯ ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ 334 ಲೀಟರ್‌ ಮದ್ಯವನ್ನು ತಹಶೀಲ್ದಾರ್‌ ಸಮ್ಮುಖದಲ್ಲಿ ನಾಶಪಡಿಸಲಾಯಿತು. ನಗರದ ಅಬಕಾರಿ ವಲಯ ಕಚೇರಿಯಲ್ಲಿ 70 ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ 277 ಲೀಟರ್‌ ಮದ್ಯ ಹಾಗೂ 37.85 ಲೀ. ಬಿಯರ್‌ ಹಾಗೂ 19 ಲೀಟರ್‌ ಸೇಂದಿಯನ್ನು ತಹಶೀಲ್ದಾರ್‌ ಬಸವರಾಜು, ಹುಣಸೂರು ಅಬಕಾರಿ ಉಪ ಅಧೀಕ್ಷಕ ಪಿ.ರಮೇಶ್‌,

Advertisement

ಕೆಎಸ್‌ಬಿಸಿಎಲ್‌ ಘಟಕದ ವ್ಯವಸ್ಥಾಪಕ ಸಿ.ಸಿದ್ದರಾಜು ಸಮ್ಮುಖದಲ್ಲಿ ನಾಶಪಡಿಸಲಾಯಿತು. ಈ ವೇಳೆ ಅಬಕಾರಿ ನಿರೀಕ್ಷಕರಾದ ಧರ್ಮರಾಜು, ನಟರಾಜ್‌, ಅಬಕಾರಿ ಉಪ ನಿರೀಕ್ಷಕರಾದ ಮಾನಸ, ಮೋಹನ್‌ ಹಾಗೂ ಇಲಾಖೆ ಸಿಬ್ಬಂದಿ ಇದ್ದರು. ತಾಲೂಕಿನ ವಿವಿಧೆಡೆ ಅಕ್ರಮ ಮದ್ಯ ಮಾರಾಟ-ಸಾಗಾಟ, ದಾಸ್ತಾನು ಪ್ರಕರಣಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡು ಪ್ರತಿ ವರ್ಷ ಜಿಲ್ಲಾ ಉಪ ಆಯುಕ್ತರ ಆದೇಶದಂತೆ ನಾಶಪಡಿಸಲಾಗುವುದೆಂದು ನಿರೀಕ್ಷಕ ಧರ್ಮರಾಜ್‌ ತಿಳಿಸಿದರು.

14ಕ್ಕೆ ವಾಹನ ಹರಾಜು: ಅಕ್ರಮ ಮದ್ಯ ಪ್ರಕರಣಗಳಲ್ಲಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿರುವ 2 ಮಾರುತಿ ಕಾರು, ಎರಡು ಆಟೋ, ಮೂರು ಬೈಕ್‌ಗಳನ್ನು ಗುರುವಾರ ಮಧ್ಯಾಹ್ನ 3ಕ್ಕೆ ಹುಣಸೂರು ವಲಯ ಕಚೇರಿಯಲ್ಲಿ ಹರಾಜು ಹಾಕಲಾಗುವುದೆಂದು ಅಬಕಾರಿ ಉಪ ಅಧೀಕ್ಷಕ ಪಿ.ರಮೇಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next