Advertisement

ಬಾಲಕಿ ಸಾವಿನ ವರದಿ ಕೇಳಿದ ಗೃಹ ಇಲಾಖೆ

11:43 AM Mar 27, 2019 | Team Udayavani |

ಬೆಂಗಳೂರು: ಶಿವಾಜಿನಗರ ಪೊಲೀಸ್‌ ವಸತಿ ಗೃಹದಲ್ಲಿ ಮಾ. 5ರಂದು ಬೆಂಕಿ ಕೆಂಡ ತುಂಬಿಕೊಂಡಿದ್ದ ಕಸದ ಮೇಲೆಬಿದ್ದು ಗಂಭೀರವಾಗಿ ಗಾಯಗೊಂಡು ಮೂರು ವರ್ಷದ ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ವರದಿ ಕೇಳಿದೆ.

Advertisement

ಪ್ರಕರಣದಲ್ಲಿ ಅಧಿಕಾರಿಗಳದ್ದು ಕರ್ತವ್ಯ ಲೋಪ ಇದೆಯೇ ಎಂಬುದರ ಬಗ್ಗೆ ಇದುವರೆಗಿನ ತನಿಖಾ ವರದಿಯನ್ನು ಸಲ್ಲಿಸುವಂತೆ ಗೃಹ ಇಲಾಖೆ ನಗರ ಪೊಲೀಸರಿಗೆ ಸೂಚನೆ ನೀಡಿದ್ದು, ಮಾಹಿತಿ ಪಡೆದುಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಗೃಹ ಸಚಿವ ಎಂ.ಬಿ ಪಾಟೀಲ್‌, ಈ ಬಗ್ಗೆ ಖುದ್ದು ವರದಿ ಕೇಳಿದ್ದು. ಈ ನಿಟ್ಟಿನಲ್ಲಿ ಗೃಹ ಇಲಾಖೆ ಮಾಹಿತಿ ಸಂಗ್ರಹಿಸಿದೆ ಎಂದು ತಿಳಿದುಬಂದಿದೆ.

ಮತ್ತೂಂದೆಡೆ ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ಸೂಚನೆಯಂತೆ ಪೂರ್ವ ವಿಭಾಗದ ಡಿಸಿಪಿ ರಾಹುಲ್‌ಕುಮಾರ್‌ ಶಹಾಪುರವಾಡ್‌ ತನಿಖೆ ಮುಂದುವರಿಸಿದ್ದಾರೆ. ಮೃತ ಬಾಲಕಿ ಹರ್ಷಾಲಿ ತಂದೆ ಲೋಕೇಶಪ್ಪ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ತನಿಖಾ ತಂಡದ ಪೊಲೀಸರು ಶಿವಾಜಿನಗರ ಪೊಲೀಸ್‌ ವಸತಿ ಗೃಹಕ್ಕೆ ಭೇಟಿ ನೀಡಿದ್ದು, ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ.

ಆಘಾತದಿಂದ ಚೇತರಿಸಿಕೊಳ್ಳದ ತಾಯಿ: “ಉದಯವಾಣಿ’ ಜತೆ ಮಾತನಾಡಿದ ಹರ್ಷಾಲಿ ತಂದೆ ಲೋಕೇಶಪ್ಪ, ಮಗಳ ದುರಂತ ಸಾವಿನ ಆಘಾತದಿಂದ ಪತ್ನಿ ಇನ್ನೂ ಹೊರಬಂದಿಲ್ಲ. ಅದೇ ನೋವಿನಲ್ಲಿದ್ದೇವೆ. ಕರ್ತವ್ಯಕ್ಕೆ ಹಾಜರಾದ ಬಳಿಕ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಘಟನೆ ಬಗ್ಗೆ ಮಾಹಿತಿ ನೀಡುವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next