Advertisement

ಮಧ್ಯಾಹ್ನವೇ ಅಂಗಡಿ ಬಂದ್‌ಗೆ ನಿರ್ಧಾರ

03:52 PM May 07, 2020 | Suhan S |

ಚನ್ನಮ್ಮನ ಕಿತ್ತೂರು: ತಹಶೀಲ್ದಾರ ಪ್ರವೀಣ ಜೈನ್‌ ಹಾಗೂ ಪಪಂ ಮುಖ್ಯಾಧಿಕಾರಿ ಬಿ.ಬಿ.ಗೊರೋಶಿ ಅವರಿಗೆ ಬುಧವಾರ ವರ್ತಕರು ಮನವಿ ಸಲ್ಲಿಸಿದರು.

Advertisement

ಸಾರ್ವಜನಿಕರು ದಿನಸಿ ಸೇರಿದಂತೆ ಇನ್ನುಳಿದ ಅವಶ್ಯಕ ವಸ್ತುಗಳ ನೆಪವೊಡ್ಡಿ ಪಟ್ಟಣದಲ್ಲಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ಇದರಿಂದ ಕೋವಿಡ್ ಹರಡುವ ಸಾಧ್ಯತೆ ಇದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಂಡಿರುವ ವರ್ತಕರು ಮಧ್ಯಾಹ್ನ 1 ಗಂಟೆಗೆ ಪಟ್ಟಣದ ಎಲ್ಲ ವ್ಯವಹಾರ ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ ಪ್ರವೀಣ ಜೈನ್‌, ಸಮಾಜದ ಆರೋಗ್ಯದ ಕುರಿತು ವರ್ತಕರು ಸ್ವ ಪ್ರೇರಣೆಯಿಂದ ಕೈಗೊಂಡಿರುವ ನಿರ್ಣಯ ಸ್ವಾಗತಾರ್ಹ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next