Advertisement

ಕುರಂಗಣಿ ಪರ್ವತದಲ್ಲಿ ಕಾಳ್ಗಿಚ್ಚು ಮೃತರ ಸಂಖ್ಯೆ 8ಕ್ಕೆ ಏರಿಕೆ

09:10 AM Mar 12, 2018 | Team Udayavani |

ಥೇಣಿ : ತಮಿಳುನಾಡಿನ ಥೇಣಿ ಜಿಲ್ಲೆಯ ಕುರಂಗಣಿ ಪರ್ವತ ಪ್ರದೇಶದಲ್ಲಿ ರವಿವಾರ ಏಕಾಏಕಿ ಉಂಟಾದ ಕಾಳ್ಗಿಚ್ಚಿನಲ್ಲಿ ಕಾಳ್ಗಿಚ್ಚಿನಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಮೃತರಲ್ಲಿ ನಾಲ್ವರು ಮಹಿಳೆಯರು ನಾಲ್ವರು ಗಂಡಸರು ಹಾಗೂ ಓರ್ವ ಬಾಲಕ ಎಂದು ತಿಳಿದುಬಂದಿದೆ. ಈ ಮಾಹಿತಿಯನ್ನು ಮದುರೆ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಖಚಿತಪಡಿಸಿದ್ದಾರೆ.

Advertisement

ಕೊಯಮತ್ತೂರು ಮತ್ತು ಈರೋಡ್‌ನ‌ ಕಾಲೇಜು ವಿದ್ಯಾರ್ಥಿಗಳು, ಚೆನ್ನೈಯಿಂದ ಆಗಮಿಸಿದ ಮಹಿಳೆಯರು ರವಿವಾರ ಕುರಂಗಣಿ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿದ್ದಾರೆ. ಮೂಲಗಳ ಪ್ರಕಾರ ಅವರು ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ಒಟ್ಟು ಮೂವತ್ತೇಳು ಮಂದಿ ಪರ್ವತ ಪ್ರದೇಶದಲ್ಲಿ ಇದ್ದಾರೆ. ಕೊಯಮತ್ತೂರಿನಲ್ಲಿರುವ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್‌ಗಳನ್ನು ರಕ್ಷಣೆಗೆ ನಿಯೋಜಿಸಲಾಗಿದೆ. ಇದೇ ವೇಳೆ 27 ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ಟ್ರಕ್ಕ್ಕಿಂಗ್ ತೆರಳಿದವರೆಲ್ಲರೂ 8ರಿಂದ ಮೂವತ್ತು ವರ್ಷದೊಳಗಿನವರಾಗಿದ್ದರೆ ಎಂದು ಹೇಳಲಾಗಿದೆ.

ಘಟನಾ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮದುರೆ ಅರಣ್ಯ ವಲಯದ ಹಿರಿಯ ಅಧಿಕಾರಿ, ಇದು ಚಾರಣ ಕೈಗೊಳ್ಳಲು ಸೂಕ್ತ ಸಮಯ ಅಲ್ಲ ಎಂದು ಪ್ರತಿಪಾದಿಸಿದ್ದಾರೆ.
ಕಾಳ್ಗಿಚ್ಚು ಉಂಟಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ನಡೆಸಲು ಐಎಎಫ್ನ ಹೆಲಿಕಾಪ್ಟರ್‌ಗಳನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ರಿಗೆ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸ್ಪಂದಿಸಿದ್ದ ರಕ್ಷಣಾ ಸಚಿವರು ಕೊಯಮತ್ತೂರಿನಲ್ಲಿರುವ ಏರ್‌ಬೇಸ್‌ಗೆ ನೆರವಾಗುವಂತೆ ಸೂಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next