Advertisement

ಮರ್ಕಂಜ: ಕೊಟ್ಟಿಗೆ ಕುಸಿದು ವೃದ್ಧ  ಸಾವು

08:15 AM Aug 29, 2017 | Harsha Rao |

ಸುಳ್ಯ: ಸುಳ್ಯ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸೋಮವಾರ ಕೊಟ್ಟಿಗೆ ಕುಸಿದು ವೃದ್ಧರೋರ್ವರು ಮೃತಪಟ್ಟಿದ್ದಾರೆ. ಮರ್ಕಂಜ ಗ್ರಾಮದ ಗೋಳಿಯಡ್ಕ ಶಾಲೆ ಬಳಿಯ ಕೊರತ್ತಿಕಜೆ ನಿವಾಸಿ ಕಬ್ಬು (75) ಅವರು ಮೃತಪಟ್ಟವರು.

Advertisement

ಸೋಮವಾರ ಅಪರಾಹ್ನ 3 ಗಂಟೆಯ ಸುಮಾರಿಗೆ ದುರ್ಘ‌ಟನೆ ಸಂಭವಿಸಿದೆ. ಕಬ್ಬು ಅವರು ಮನೆಯಿಂದ ಕೊಟ್ಟಿಗೆಗೆ ತೆರಳುತ್ತಿದ್ದಂತೆ ಏಕಾಏಕಿ ಕಂಬಗಳು ಮುರಿದು ಕೊಟ್ಟಿಗೆ ಪೂರ್ತಿ ಧರಾಶಾಯಿಯಾಯಿತು. ಕಬ್ಬು ಅವರು ಅದರಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟರು.

ಘಟನಾ ಸ್ಥಳಕ್ಕೆ ತಹಶೀಲ್ದಾರ್‌ ಗಣೇಶ್‌, ಕಂದಾಯ ನಿರೀಕ್ಷಕ ಅವಿನ್‌ ರಂಗತ್ತಮಲೆ ಹಾಗೂ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಮನೆ ಕುಸಿತ
ಕನಕಮಜಲು ಗ್ರಾಮದ ಮಳಿ ಕಾಲನಿ ಸಮೀಪದ ಚಂದ್ರಶೇಖರ ಅವರ ಮನೆ ಕುಸಿದು ನೆಲಸಮವಾಗಿದೆ. ಈ ವೇಳೆ ಮನೆ ಮಂದಿ ಇಲ್ಲದಿದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ.

ಸೇತುವೆ ಮುಳುಗಡೆ
ಭಾರೀ ಮಳೆಯ ಪರಿಣಾಮದಿಂದ ಸುಳ್ಯದ ಬೆಟ್ಟಂಪಾಡಿ ಸೇತುವೆ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತ  ಗೊಂಡಿತು. ಹೆ¨ªಾರಿಯ ರಸ್ತೆ  ಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೂ ಅಡೆ ತಡೆ  ಯುಂಟಾ ಯಿತು. ಸುಳ್ಯದ ಬೆಟ್ಟಂಪಾಡಿ ಕಾಲನಿಗೆ ಹೋಗುವ ಸೇತುವೆ ಕೂಡ ಮುಳುಗಡೆಯಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next