Advertisement

ಬಿಜೆಪಿ ಸರ್ಕಾರ ರಚನೆಯಲ್ಲಿ ಅನರ್ಹ ಶಾಸಕರ ಕೊಡುಗೆ ಅಪಾರ: ವಿ.ಸೋಮಣ್ಣ

09:51 AM Oct 01, 2019 | Team Udayavani |

ಮೈಸೂರು: ಸರ್ಕಾರ ರಚನೆಗೆ ಅನರ್ಹ ಶಾಸಕರು ತ್ಯಾಗ ಮಾಡಿದ್ದು, ಅದನ್ನು ನಾವು ಮರೆಯಬಾರದು. ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದರು.

Advertisement

ಮಕ್ಕಳ ದಸರಾ ಉದ್ಘಾಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ ಭಾನುವಾರ ಹೇಳಿದ್ದ ಅನರ್ಹ ಶಾಸಕ ದಾರಿ ಅವರಿಗೆ ನಮ್ಮ ದಾರಿ ನಮಗೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅನರ್ಹ ಶಾಸಕರ ತ್ಯಾಗವನ್ನು ನಾವು ನೆನೆಯಬೇಕು. ಉಮೇಶ್ ಕತ್ತಿ ಏಕೆ ಹೀಗೆ ಮಾತನಾಡಿದ್ದಾನೋ ಗೊತ್ತಿಲ್ಲ. ಅವನು ನನ್ನ ಗೆಳೆಯ, ಅವನ ಜೊತೆ ಮಾತನಾಡುತ್ತೇನೆ ಎಂದರು.

ಬಿ ಎಸ್ ಯಡಿಯೂರಪ್ಪ ಅವರು ಇತ್ತೀಚೆಗೆ ಗರಂ ಆಗಿರುವ ಪ್ರಶ್ನೆಗೆ ಉತ್ತರಿಸಿ, ಅವರು ಸಾಕಷ್ಟು ಅನುಭವಿ ರಾಜಕಾರಣಿ. ಅನುಭವ ಇದೆ. ಎಲ್ಲವನ್ನು ಸಮರ್ಪಕವಾಗಿ ನಿರ್ವಹಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next