Advertisement

ಗುತ್ತಿಗೆದಾರರ ಆರೋಪ ಸುಳ್ಳು: H.K ಪಾಟೀಲ್‌

10:57 PM Aug 10, 2023 | Team Udayavani |

ಬೆಂಗಳೂರು: ಸರ್ಕಾರದ ವಿರುದ್ಧ ಗುತ್ತಿಗೆದಾರರು ಮಾಡುತ್ತಿರುವ ಆರೋಪ ಸುಳ್ಳು. ಈ ಆರೋಪಕ್ಕೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದ್ದಾರೆ.

Advertisement

ಡಿಸಿಎಂ ವಿರುದ್ಧ ಗುತ್ತಿಗೆದಾರರು ನೇರ ಆರೋಪ ಮಾಡುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ಆಣೆ ಮಾಡುತ್ತೇವೆ ಇಲ್ಲಿ ಬರುತ್ತೇವೆ ಎಂದರೆ ಆಗುವುದಿಲ್ಲ. ಸರ್ಕಾರದ ಮೇಲೆ ಬಹಳ ಲಘುವಾಗಿ ಮಾಡುತ್ತಿರುವ ಆರೋಪ ಖಂಡಿಸುತ್ತೇವೆ ಎಂದರು.

ಐದು ಗ್ಯಾರಂಟಿ ಅನುಷ್ಠಾನ ಯಶಸ್ವಿಯಾಗಿ ನಡೆಯುತ್ತಿದೆ. ಇದೇ ಕಾರಣಕ್ಕೆ ಆರೋಪ ಬರುತ್ತಿದೆ. ಈ ಬೆಳವಣಿಗೆ ಸರ್ಕಾರದ ವಿಶ್ವಾಸಾರ್ಹತೆ ಹೆಚ್ಚಿಸುತ್ತಿದೆ ಎಂದ ಅವರು ಗುತ್ತಿಗೆದಾರರು ಬಿಲ್‌ ಬಾಕಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕೆಲಸ ಆಗಿಲ್ಲ ಎಂಬ ಆರೋಪ ಇವೆ. ಅದರ ಬಗ್ಗೆ ಸಂಬಂಧಿಸಿದ ಮಂತ್ರಿಗಳು ಉತ್ತರಿಸಿದ್ದಾರೆ. ತನಿಖೆಗೆ ಸಮಿತಿ ರಚಿಸಿದ್ದು, ವರದಿ ಬಂದ ಕೂಡಲೇ ಕ್ರಮಕೈಗೊಳ್ಳುತ್ತೇವೆ. ಸರ್ಕಾರದ ವಿರುದ್ಧ ಕಳಂಕ ಹಚ್ಚಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next